ಉಡುಪಿ: ಬಿಜೆಪಿ ಹೊಸ ಶಕ್ತಿ ತುಂಬಲಿರುವ ಜೆ.ಪಿ. ನಡ್ಡಾ ಭೇಟಿ – Vishwanews24

Featured, ಉಡುಪಿ

ಉಡುಪಿ ಬಿಜೆಪಿ ಹೊಸ ಶಕ್ತಿ ತುಂಬಲಿರುವ ಜೆ.ಪಿ. ನಡ್ಡಾ ಭೇಟಿ.

ಉಡುಪಿ : ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಇವರು ಬೂತ್ ಸಮಿತಿ ಅಧ್ಯಕ್ಷರೊಂದಿಗೆ ನಡೆಸುವ ಸಭೆಯು ಉಡುಪಿ ಜಿಲ್ಲಾ ಬಿಜೆಪಿಗೆ ಹೊಸ ಶಕ್ತಿ ತುಂಬಲಿದೆ ಎಂದು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವೀಣಾ ಎಸ್. ಶೆಟ್ಟಿ ತಿಳಿಸಿದರು.

ರಾಷ್ಟಿçÃಯ ಅಧ್ಯಕ್ಷರ ಭೇಟಿಯ ಬಗ್ಗೆ ಜಿಲ್ಲಾ ಮಹಿಳಾ ಮೋರ್ಚಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಇವರು ಉಡುಪಿ ಜಿಲ್ಲೆಯ ೫ ಸ್ಥಾನಗಳನ್ನು ಬಿಜೆಪಿ ಗೆಲುವಿನ ಅಂತರ ಈ ಸಭೆಯಿಂದ ಹೆಚ್ಚಲಿದೆ ಎಂದು ತಿಳಿಸಿದರು.

ಈ ಸಭೆಯಲ್ಲಿ ಮಂಗಳೂರು ಪ್ರಭಾರಿಗಳಾದ ಉದಯಕುಮಾರ್ ಶೆಟ್ಟಿಯವರು, ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್‌ರವರು ರಾಷ್ಟಿçÃಯ
ಅಧ್ಯಕ್ಷರ ಜಿಲ್ಲಾ ಪ್ರವಾಸದ ಪೂರ್ವ ತಯಾರಿಗೆ ಮಾರ್ಗದರ್ಶನ ಮಾಡಿದರು. ಸಭೆಯಲ್ಲಿ ಜಿಲ್ಲಾ ಬಜೆಪಿ ಉಪಾಧ್ಯಕ್ಷರಾದ ಗೀತಾಂಜಲಿ ಸುವರ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಸುಜಲಾ ಸತೀಶ್, ಅಶ್ವಿನಿ ಶೆಟ್ಟಿ, ಲಕ್ಷಿö್ಮÃ, ದಯಾಶಿನಿ, ಪೂರ್ಣಿಮ ರತ್ನಾಕರ್, ನೀರಜಾ ಶೆಟ್ಟಿ, ವಿದ್ಯಾ ಶ್ಯಾಮ ಸುಂದರ್, ಕಾವೇರಿ ಗಾಣಿಗ, ಸರೋಜಾ ಶೆಣೈ, ಸುಗುಣ ಉಪಸ್ಥಿತರಿದ್ದರು.

Leave a Reply