ಉಡುಪಿ : ಬೈಕ್‌ ಡೂಮ್‌ನಲ್ಲಿ ಹಾವು; ಬೆಚ್ಚಿ ಬಿದ್ದ ಸವಾರ – vishwanews24

Featured, ಉಡುಪಿ

ಉಡುಪಿ : ಬೈಕ್‌ ಡೂಮ್‌ನಲ್ಲಿ ಹಾವು; ಬೆಚ್ಚಿ ಬಿದ್ದ ಸವಾರ

ಉಡುಪಿ: ಮಣಿಪಾಲದ ಯುವಕನೊಬ್ಬ ತಮ್ಮ ಬೈಕ್‌ ಡೂಮ್‌ನಲ್ಲಿ ಹಾವು ಕಂಡು ಬೆಚ್ಚಿ ಬಿದ್ದ ಘಟನೆ ಮಂಗಳವಾರ ನಡೆದಿದೆ.

ಮಣಿಪಾಲದ ರಾಹುಲ್‌ ಬೆಳಗ್ಗೆ ಕಿನ್ನಿಮೂಲ್ಕಿ ಪೆಟ್ರೋಲ್‌ ಬಂಕ್‌ ಬಳಿ ಬೈಕ್‌ ನಿಲ್ಲಿಸಿ ಡ್ರೈವಿಂಗ್‌ ಕೆಲಸಕ್ಕೆ ಹೋಗಿದ್ದರು. ರಾತ್ರಿ 8.30 ಕ್ಕೆ ಕೆಲಸದಿಂದ ವಾಪಸ್ಸಾಗಿ ಬೈಕ್‌ ನೊಂದಿಗೆ ಉಡುಪಿ ಬಿಗ್‌ ಬಝಾರ್‌ಬಳಿ ಬಂದರು. ಆಗ ಬೈಕ್‌ ಡೂಮ್‌ ಅಲ್ಲಿ ಮಲಗಿದ್ದ ಹಾವು ಕಣ್ಣಿಗೆ ಬಿದ್ದಿತು. ಕೂಡಲೇ ಬೈಕ್‌ ನಿಲ್ಲಿಸಿ ಅವಘಡದಿಂದ ಪಾರಾದರು.

ಜುಲೈ 9ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ – vishwanews24

ಬಳಿಕ ಅರಣ್ಯ ಇಲಾಖೆಯ ಮೂಲಕ ಪ್ರಾಣೇಶ್‌ ಪರ್ಕಳ ಇವರಿಗೆ ಕರೆ ಮಾಡಿ ಹಾವು ಇರುವ ಮಾಹಿತಿ ನೀಡಿದರು. ಸ್ಥಳಕ್ಕೆ ಉರಗ ಪರಿಣಿತರು ಬಂದು ನೋಡಿದಾಗ ಅದು ವಿಷ ರಹಿತ ಹೆಬ್ಬಾವಿನ ಮರಿ ಆಗಿದ್ದು ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಲಾಗಿದೆ.

ರಾಹುಲ್ ಗಾಂಧಿ ಹಿಂದೂಗಳ ತಾಳ್ಮೆ ಪರೀಕ್ಷೆಯ ದುಸ್ಸಾಹಸಕ್ಕೆ ಮುಂದಾಗಬೇಡಿ : ಯಶ್ಪಾಲ್ ಸುವರ್ಣ ಆಕ್ರೋಶ – vishwanews24

Leave a Reply