ಉಡುಪಿ: ಬ್ರೇಕ್ ಫೇಲ್- ಸ್ಕೂಟರ್ಗೆ ಬಸ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು – vishwanews24
ಉಡುಪಿ: ಬ್ರೇಕ್ ಫೇಲ್- ಸ್ಕೂಟರ್ಗೆ ಬಸ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು
ಉಡುಪಿ :ಬ್ರೇಕ್ ವೈಫಲ್ಯದಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಿರಿಯ ನಾಗರಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
2024ರ ಆಗಸ್ಟ್ 01 ರಂದು ಕಲ್ಮಾಡಿಯಲ್ಲಿ ಈ ಘಟನೆ ನಡೆದಿದೆ.
ಬಸ್ ಆದಿ ಉಡುಪಿಯಿಂದ ಮಲ್ಪೆಗೆ ತೆರಳುತ್ತಿತ್ತು. ತಾಂತ್ರಿಕ ದೋಷದಿಂದ ಎದುರಿಗೆ ಬರುತ್ತಿದ್ದ ಸ್ಕೂಟರ್ಗೆ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ನುಜ್ಜುಗುಜ್ಜಾಗಿದೆ.ದ್ವಿಚಕ್ರ ವಾಹನ ಸವಾರ, ನಿವೃತ್ತ ಮುಖ್ಯೋಪಾಧ್ಯಾಯ ಭಾಸ್ಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
