ಉಡುಪಿ : ಭಯೋತ್ಪಾದನೆ ವಿಷಯದಲ್ಲಿ ಶಾಸಕ ರಘುಪತಿ ಭಟ್ ರಾಜಕೀಯ ಲಾಭದ ಪ್ರಯತ್ನ ಮಾಡಬಾರದು: ಅಮೃತ್ ಶೆಣೈ – Vishwanews24

Featured, ಉಡುಪಿ

ಭಯೋತ್ಪಾದನೆ ವಿಷಯದಲ್ಲಿ ಶಾಸಕ ರಘುಪತಿ ಭಟ್ ರಾಜಕೀಯ ಲಾಭದ ಪ್ರಯತ್ನ ಮಾಡಬಾರದು: ಅಮೃತ್ ಶೆಣೈ

ಉಡುಪಿ: ಬ್ರಹ್ಮಾವರದ ತಾಜುದ್ದೀನ್ ಎಂಬ ಕಾಂಗ್ರೆಸ್ ಪದಾಧಿಕಾರಿಯ ಮಗನನ್ನು ನಿನ್ನೆ ರಾಷ್ಟ್ರೀಯ ತನಿಖಾ ಸಂಸ್ಥೆಯವರು ನಿನ್ನೆ ಶಂಕಿತ ಭಯೋತ್ಪಾದಕ ಎಂಬ ಆರೋಪದಲ್ಲಿ ದಸ್ತಗಿರಿ ಮಾಡಿ ಕೊಂಡೊಯ್ದ ತಕ್ಷಣ ಉಡುಪಿ ಶಾಸಕರು ಬಹಳ ತರಾತುರಿಯಲ್ಲಿ ಆರೋಪಿಯ ತಂದೆಯ ಜತೆ ಕಾಂಗ್ರೆಸ್ ಮುಖಂಡರ ಫೋಟೊಗಳನ್ನು ತೋರಿಸುತ್ತಾ ಅವರ ಹೆಂಡತಿಯ ಬಗ್ಗೆಯೂ ಆರೋಪಗಳನ್ನು ಮಾಡುತ್ತಾ, ಅವರ‌ ಕುಟುಂಬ ಆರ್ಥಿಕವಾಗಿ ಇತ್ತೀಚೆಗೆ ಇಂತಹ ದುಷ್ಕೃತ್ಯಗಳಿಂದಲೇ ಸಬಲ ಆಗಿದೆ ಎಂದರು.

ಭಟ್ ರವರು ತಮ್ಮ ಸರಕಾರವನ್ನು ಒತ್ತಾಯಿಸಿ ತನಿಖೆ ಯನ್ನು ತೀವ್ರ ಗತಿಯಲ್ಲಿ ಮಾಡಿಸಿ ಅಪರಾಧ ಸಾಬೀತಾದರೆ ಅಪರಾಧಿಗಳಿಗೆ ಶಿಕ್ಷೆ ನೀಡಲಿ, ಆದರೆ ಹಿಜಾಬ್ ವಿಚಾರವನ್ನು ಉಲ್ಲೇಖ ಮಾಡುತ್ತಾ ಕರಾವಳಿಯಲ್ಲಿ ಅನೇಕ ಶಂಕಿತ ಚಟುವಟಿಕೆಗಳು ನಡೆಯುತ್ತಾ ಇವೆ ಅನ್ನುತ್ತಾ ಆರೋಪಿಯ ತಂದೆಯನ್ನು ಕಾಂಗ್ರೆಸ್ ಉಚ್ಚಾಟನೆ ಮಾಡುತ್ತಾ ಅಥವಾ ಅವರಿಗೆ ಪದೋನ್ನತಿ ನೀಡುತ್ತಾ ಎಂದು ಕೇಳಿರುವುದು ಬೇಜವಾಬ್ದಾರಿ ಹಾಗೂ ಅಸಂವೇದನೀಯ.

ಉಡುಪಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ  ಹೈಕಮಾಂಡ್ ಕಿವಿಯಲ್ಲೂ ಹೇಳಿಲ್ಲ-ಕನ್ಫರ್ಮ್ ಮಾಡಿಲ್ಲ: ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ – vishwanews24

ಉಡುಪಿಯ ಜನರನ್ನು ಇನ್ನಷ್ಟು ಆತಂಕಿತರನ್ನಾಗಿ ಮಾಡುತ್ತಾ ಭಯೋತ್ಪಾದನೆ ಗೆ ಕಾಂಗ್ರೆಸ್ ನವರು ಮೃದು ಧೋರಣೆ ತೋರುತ್ತಾರೆ ಎಂದು ಹೇಳುತ್ತಾ ಉಡುಪಿಯ ಸೂಕ್ಷ್ಮ ಸಂವೇದನೀಯ ವಾತಾವರಣವನ್ನು ಪರಿಗಣನೆಗೆ ತಗೊಳ್ಳದೆ ಬಂಧನ ಆದ ತಕ್ಷಣ ತನಿಖಾವರದಿಯನ್ನೇ ನೀಡಿದ ಮಾದರಿಯಲ್ಲಿ ಇಡೀ ಕುಟುಂಬದ‌ ಬಗ್ಗೆ ಹಾಗೂ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವುದನ್ನು ಸಹಬಾಳ್ವೆ ಉಡುಪಿ ಇದರ ಅಧ್ಯಕ್ಷ ಅಮೃತ್ ‌ಶೆಣೈ ಖಂಡಿಸಿದ್ದಾರೆ.

ಭಯೋತ್ಪಾದನೆಯ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷ ಭೇಧ ತೊರೆದು ಒಟ್ಟಿಗೆ ಹೋರಾಟ ಮಾಡುವ ಮುತ್ಸಧ್ದಿತನ ತೋರಬೇಕಾದ ಭಟ್ ರಾಜಕೀಯ ಲಾಭದ ಪ್ರಯತ್ನ ಮಾಡಬಾರದು, ಉಡುಪಿಯಲ್ಲಿ ಸರ್ವಪಕ್ಷಗಳ ಹಾಗೂ ಎಲ್ಲಾ ಸಂಘಟನೆಗಳ ಸಭೆಯನ್ನು ಕರೆದು ಎಲ್ಲಾ ಸೇರಿ ಜನರ ಸುರಕ್ಷತೆಯನ್ನು‌ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಹಬಾಳ್ವೆ ಆಗ್ರಹಿಸುತ್ತದೆ ಎಂದೂ ಶೆಣೈ ಯವರು ಮನವಿ ಮಾಡಿದ್ದಾರೆ.

ಬಿಜೆಪಿಯ ಹಾಲಿ ಶಾಸಕರಿಗೆ ಟಿಕೆಟ್ ಟೆಕ್ಷನ್ : ಹೈಕಮಾಂಡ್ ಕೈ ಸೇರಿದೆ 16 ಜಿಲ್ಲೆಗಳ ಶಾರ್ಟ್ ಲಿಸ್ಟ್ – Vishwanews24

Leave a Reply