ಉಡುಪಿ : ಮಣ್ಣು ಕುಸಿತ – ಇಂದು ಮಂಗಳೂರು- ಮುಂಬಯಿ ರೈಲು ಸೇವೆ ರದ್ದು – vishwanews24

Featured, ಉಡುಪಿ, ದಕ್ಷಿಣ ಕನ್ನಡ

ಉಡುಪಿ : ಮಣ್ಣು ಕುಸಿತ ; ಇಂದು ಮಂಗಳೂರು- ಮುಂಬಯಿ ರೈಲು ಸೇವೆ ರದ್ದು

ಉಡುಪಿ : ಗೋವಾದ ಕೊಂಕಣ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿರುವ ಪರಿಣಾಮ ಜುಲೈ 10ರಂದು ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಾಸವಾಗಿದೆ. ಜುಲೈ 11ರಂದು ಮಂಗಳೂರಿನಿಂದ ಮುಂಬಯಿಗೆ ಸಂಚರಿಸಬೇಕಿದ್ದ 12134 ಸಂಖ್ಯೆಯ ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಪುಕಟನೆ ತಿಳಿಸಿದ.

ಕೊಂಕಣ ರೈಲು ಮಾರ್ಗದಲ್ಲಿ ಗೋವಾದಿಂದ ಮುಂಬಯಿ ಕಡೆ ಸಂಚರಿಸುವ ಹಾಗೂ ಮುಂಬಯಿಂದ ಗೋವಾ ಮಾರ್ಗವಾಗಿ ಉಡುಪಿ, ಮಂಗಳೂರಿಗೆ ಬರುವ ರೈಲುಗಳ ಸಂಚಾರದಲ್ಲೂ ವ್ಯತ್ಯಯವಾಗಿದೆ. ಆದರೆ ಜುಲೈ 10ರಂದು ರಾತ್ರಿ 8.35ಕ್ಕೆ ಎಲ್ಲ ಹಳಿಗಳನ್ನು ಸುಸ್ಥಿತಿಗೆ ತಂದು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕುಂದಾಪುರ: ಶ್ರೀ ಮಾತಾ ಆಸ್ಪತ್ರೆಯ ಮಾಲೀಕ ಡಾ.ಸತೀಶ್ ಹೃದಯಾಘಾತದಿಂದ ನಿಧನ – vishwanews24

Leave a Reply