ಉಡುಪಿ : ಮುಖ್ಯಮಂತ್ರಿ ಪದಕ ವೀಜೆತ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳ ಅಭಿನಂದನಾ ಸಮಾರಂಭ- vishwanews24

Featured, ಉಡುಪಿ

ಉಡುಪಿ : ಮುಖ್ಯಮಂತ್ರಿ ಪದಕ ವೀಜೆತ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳ ಅಭಿನಂದನಾ ಸಮಾರಂಭ- vishwanews24

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ 2020ರ ಮುಖ್ಯಮಂತ್ರಿ ಪದಕ ವೀಜೆತ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳ ಅಭಿನಂದನಾ ಸಮಾರಂಭವನ್ನು ದಿನಾಂಕ 17.04.2021ನ ಶನಿವಾರ ಪೂರ್ವಾಹ್ನ ಗಂಟೆ 10:00 ಕ್ಕೆ ಹೋಟೆಲ್ ಸ್ವದೇಶ್‌ ಹೆರಿಟೇಜ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಅಧ್ಯಕ್ಷರಾದ ಶ್ರೀ ಎಂ. ಶ್ರೀನಾಗೇಶ್ ಹೆಗ್ಡೆ ಇವರು ವಹಿಸಲಿದ್ದು, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಕಾವೇರಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಶುಪಾಲರಾದ ಡಾ. ಪ್ರಕಾಶ್ ಕಣೆವೆ ಇವರು ಶುಭಾಶಂಸನೆಯನ್ನು ಮಾಡಲಿರುವರು ಎಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ವಳಕಾಡು ತಿಳಿಸಿದರು.

ಮಂಗಳೂರು: ಬಳ್ಳಾಲ್ ಬಾಗ್ ನಲ್ಲಿ ಹೈಪರ್ ಮಾರ್ಕೆಟ್ ಬೆಂಕಿಗಾಹುತಿ ; ಅಪಾರ ನಷ್ಟ -Vishwanews24

ಪೋಲಿಸ್ ಇಲಾಖೆಯಲ್ಲಿ ವಿಶೇಷ ಸಾಧನಗೈದು 2020ರ ಮುಖ್ಯಮಂತ್ರಿಗಳು, ಚಿನ್ನದ ಪದಕಕ್ಕೆ ಭಾಜನರಾಗಿರುವ ಉಡುಪಿಯ ಸೆನ್ ಪೊಲೀಸ್ ಠಾಣೆಯ ಪೊಲೀಸ್ ನೀರಿಕ್ಷಕರಾದ ಶ್ರೀ ರಾಮಚಂದ್ರ ನಾಯ್ಕ,ಬೆಂಗಳೂರಿನ ಕರ್ನಾಟಕ ಲೋಕಯುಕ್ತದಲ್ಲಿ ಪೊಲೀಸ್ ನಿರೀಕ್ಷಕರಾಗಿರುವ ಶ್ರೀ ಎಂ ರಾಘವೇಂದ್ರ ಬೈಂದೂರು, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಹೆಡ್ ಕಾನ್‌ಸ್ಟೆಬಲ್‌ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಶಂಕರ ಪೂಜಾರಿ ಬಿಜೂರು, ಈ ಮೂವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದೆಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ಪತ್ರಿಕಾ ಗೋಷ್ಠಿಯಲ್ಲಿ ನಾಯ್ಕವಾದಿ ಆನಂದ ಮಡಿವಾಳ, ತಾರನಾಥ್ ಮಸ್ತ ಶೀರೂರು ಇವರು ಉಪಸ್ಥಿತರಿದ್ದರು.

ವರದಿ: ಪುರುಷೋತ್ತಮ ಸಾಲಿಯಾನ್ -ವಿಶ್ವನ್ಯೂಸ್24