ಉಡುಪಿ : ಮೆಸ್ಕಾಂನ ನಿವೃತ್ತ ಅಧಿಕಾರಿ ; ಕೃಷಿಕ ಸಗ್ರಿ ಮಧುಸೂದನ ತೆಂಕಿಲ್ಲಾಯ ನಿಧನ – Vishwanews24

Featured, ಉಡುಪಿ

ಉಡುಪಿ : ಮೆಸ್ಕಾಂನ ನಿವೃತ್ತ ಅಧಿಕಾರಿ ; ಕೃಷಿಕ ಸಗ್ರಿ ಮಧುಸೂದನ ತೆಂಕಿಲ್ಲಾಯ ನಿಧನ

ಉಡುಪಿ,: ಮೆಸ್ಕಾಂನ ನಿವೃತ್ತ ಅಧಿಕಾರಿ ಸಗ್ರಿ ಮಧುಸೂದನ ತೆಂಕಿಲ್ಲಾಯ (80) ಅವರು ಅ. 5ರಂದು ಸಗ್ರಿಯ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.

25 ವರ್ಷಗಳ ಕಾಲ ಉಡುಪಿ, ಕಾರ್ಕಳದ ಮೆಸ್ಕಾಂನಲ್ಲಿ ಸೇವೆ ಸಲ್ಲಿಸಿದ್ದರು. ಬಾಲ್ಯದಿಂದಲೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಹುಟ್ಟೂರಾದ ಸಗ್ರಿ ನೋಳೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಂಜೂರಾತಿ ಮಾಡಿಸಿ ಅದರ ಕಟ್ಟಡ ಆಗುವವರೆಗೆ ತನ್ನ ಮನೆಯ ಒಂದು ಭಾಗದಲ್ಲಿ ಶಾಲೆಯನ್ನು ನಡೆಸಿದ್ದರು.

ಶಿರ್ವ : ಬೈಕ್‌ಗೆ ರಿಕ್ಷಾ ಢಿಕ್ಕಿ ; ಸವಾರ ಬಂಟಕಲ್ ಫ್ಯಾನ್ಸಿ ಸ್ಟೋರ್‌ ಮಾಲಕ ಸಾವು – Vishwanews24

ಶಾಲೆಗೆ ಒಬ್ಬಶಿಕ್ಷಕನನ್ನು ನೇಮಿಸಿ ಆತನಿಗೆ ತನ್ನ ಸಂಬಳದಿಂದ ಸ್ವಲ್ಪ ಹಣವನ್ನು ನೀಡುತ್ತಿದ್ದರು. ಇಂದು ಆ ಶಾಲೆ ಸ್ವರ್ಣ ಮಹೋತ್ಸವ ಆಚರಿಸುವ ಸಂಭ್ರಮದಲ್ಲಿದೆ. ಹಲವಾರು ವರ್ಷ ಅದೇ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದರು.

ವೃತ್ತಿ ಜತೆ ಕೃಷಿಕರಾಗಿ ಸಾವಯುವ ಕೃಷಿಯಲ್ಲಿ ಉತ್ತಮ ಅನುಭವ ಹೊಂದಿದ್ದ ಅವರು ಕೃಷಿ ಕ್ಷೇತ್ರಕ್ಕೆ ಟಿಲ್ಲರ್‌ಯಂತ್ರ ಪ್ರವೇಶಿಸಿದ ಸಂದರ್ಭದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮವಾಗಿ ಟಿಲ್ಲರ್ ಯಂತ್ರ ತಂದಿದ್ದರು. ಕೃಷಿ ಮಾಡುವ ಉದ್ದೇಶದಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಜಾತಿ-ಮತ ಭೇದವಿಲ್ಲದೆ ಜಲ್ಲೆಯಾದ್ಯಂತ ೫೦೦ಕ್ಕೂ ವಮಿಕ್ಕಿದ ಶವ ಸಂಸ್ಖಾರ ಮಾಡಿದ್ದ್ರರು.

ಮಂಗಳೂರು: ಬಜ್ಪೆಯ ದಸರಾ ಶೋಭಾಯಾತ್ರೆಯಲ್ಲಿ ಆಕರ್ಷಣೆ ಪಡೆದ ಯೋಗಿ ಆದಿತ್ಯನಾಥ್ ಟ್ಯಾಬ್ಲೊ – Vishwanews24

ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಕಡಿಯಾಳಿ ವಲಯ ಹಾಗೂ ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸಂ ಸಕ್ರಿಯರಾಗಿದ್ದರು.

 

Leave a Reply