ಉಡುಪಿ : ರೈತ ಉತ್ಪಾದಕ ಕಂಪನಿ ಮೂಲಕ ಕೃಷಿ ಸೌಕರ್ಯಗಳನ್ನು ರೈತರ ಮನೆಬಾಗಿಲಿಗೆ ತಲುಪಿಸಲು ಸಾಧ್ಯ: ಕೆ. ರಘುಪತಿ ಭಟ್  – Vishwanews24

Featured, ಉಡುಪಿ

ಉಡುಪಿ : ರೈತ ಉತ್ಪಾದಕ ಕಂಪನಿ ಮೂಲಕ ಕೃಷಿ ಸೌಕರ್ಯಗಳನ್ನು ರೈತರ ಮನೆಬಾಗಿಲಿಗೆ ತಲುಪಿಸಲು ಸಾಧ್ಯ: ಕೆ. ರಘುಪತಿ ಭಟ್ 

ಉಡುಪಿ: ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ರೈತ ಉತ್ಪಾದಕ ಕಂಪನಿಗಳ ಮೂಲಕ ಅನುಷ್ಠಾನಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೇಂದು ಶಾಸಕರಾದ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ. ರಘುಪತಿ ಭಟ್ ಇವರು ತಿಳಿಸಿದರು.

ಇವರು ಉಡುಪಿ ತಾಲೂಕಿನ ಕೇದಾರೋತ್ತನ ರೈತ ಉತ್ಪಾದಕ ಕಂಪನಿಯಲ್ಲಿ ಜಲಾನಯನ ಅಭಿವೃದ್ದಿ ಇಲಾಖೆ, ಕೃಷಿ ಇಲಾಖೆ, ಹಾಗೂ ಸ್ಕೊಡ್‍ವೆಸ್ ಸಂಸ್ಥೆ ಸಹಯೋಗದಲ್ಲಿ ರಚಿತವಾಗಿರುವ ಕೇದಾರೋತ್ತನ ರೈತ ಉತ್ಪಾದಕ ಕಂಪನಿಯ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಕಂಪನಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕೃಷಿ ಉತ್ಪನ್ನಗಳಿಗೆ ಕೇದಾರೋತ್ತನ ರೈತ ಉತ್ಫಾದಕ ಕಂಪನಿಯಿಂದ ಉತ್ತೇಜನದ ಜೋತೆಗೆ ಮಾರುಕಟ್ಟೆ ಕಲ್ಪಸಿ ರೈತರಿಗೆ ಲಾಭದಾಯಕ ಕೃಷಿಯಾಗಿ ಪರಿವರ್ತಿಸುವಲ್ಲಿ ರೈತ ಉತ್ಪಾದಕ ಕಂಪನಿಯ ಪಾತ್ರ ಮಹತ್ವವಾಗಿದ್ದು, ಈ ನಿಟ್ಟಿನಲ್ಲಿ ಕಂಪನಿಯ ಎಲ್ಲಾ ನಿರ್ದೇಶಕರು ಹಾಗೂ ರೈತ ಬಾಂಧವರು ಶ್ರಮ ವಹಿಸಬೇಕೆಂದು ತಿಳಿಸಿದರು. ಕೃಷಿ ಕಾರ್ಯಕ್ರಮಗಳನ್ನು ಸುಸುತ್ರವಾಗಿ ಅನುಷ್ಠಾನಗೊಳಿಸುವ ಮೂಲಕ ಕೇದಾರೋತ್ತನ ರೈತ ಉತ್ಪಾದಕ ಕಂಪನಿಯು ಮಾದರಿಯಾಗಿ ರೂಪಿಸುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣ : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ – Vishwanews24

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಂಟಿ ಕೃಷಿ ನಿರ್ದೇಶಕರು ಕೆಂಪೆಗೌಡ ಇವರು ಮಾತನಾಡಿ ರೈತ ಉತ್ಪಾದಕ ಕಂಪನಿಗಳ ರೂಪ ರೇಷುಗಳು ಹಾಗೂ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು.

ಸಭೆಯಲ್ಲಿ ಸಹಾಯಕ ಕೃಷಿ ನಿದೇಶಕರಾದ ಮೋಹನ್‍ರಾಜ್, ರೈತ ಉತ್ಪಾದಕ ಕಂಪನಿಯ ನಿರ್ದೇಶಕರು ಹಾಗೂ ಸ್ಕೊಡ್‍ವೆಸ್ ಸಂಸ್ಥೆಯ ಸಂಯೋಜನಾಧಿಕಾರಿಯಾದ ಸೂರಜ್ ಶೆಟ್ಟಿ ಹಾಗೂ ಕೇದಾರೋತ್ತನ ಕಂಪನಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಂಗಳೂರು : ಎಲ್ಲಾ ಧಾರ್ಮಿಕ‌ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಸಲು 15 ದಿನದೊಳಗೆ ಅನುಮತಿ ಪಡೆಯಬೇಕು: ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಮೈಕ್‌ ನಿಷೇಧ : ಡಿಸಿ ಆದೇಶ – Vishwanews24

Leave a Reply