ಉಡುಪಿ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ -Vishwanews24
ಉಡುಪಿ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ -Vishwanews24
ಜೆಡಿಎಸ್ ಮುಖಂಡ ಮುಕ್ತಾರ್ ಇಸ್ಲಾಯಿಲ್ ಪ್ರಕರಣದ ಆರೋಪಿ ..
ಉಡುಪಿ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಜೆಡಿಎಸ್ ಮುಖಂಡ ಮುಕ್ತಾರ್ ಇಸ್ಲಾಯಿಲ್ ಕೋಟೇಶ್ವರ ಪ್ರಕರಣದ ಆರೋಪಿ.
ಈತ ತೆಂಕನಿಡಿಯೂರಿನ ಸತೀಶ, ಅಜಿತ್ ಹಾಗೂ ಮಣಿಪಾಲದ ಸಂಗಪ್ಪ ಎಂಬ ಮೂವರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು
ವಂಚಿಸಿದ್ದಾನೆ ಎಂದು ಮೂವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಿಎಂ ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು : ರಾಜ್ಯಪಾಲರಿಗೆ ಸಿದ್ದರಾಮಯ್ಯ ಒತ್ತಾಯ -Vishwanews24
ದೂರಿನ ಪ್ರಕಾರ ಮುಕ್ತಾರ್ ಒಂದು ವರ್ಷದ ಹಿಂದೆ ಸತೀಶ್, ಅಜಿತ್, ಸಂಗಪ್ಪ ಎಂಬ ಮೂವರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ,
ಮೂವರಿಂದಲೂ ತಲಾ 65,000 ರೂ ನಗದುಪಡೆದುಕೊಂಡಿದ್ದಾನೆ. ಆದರೆ ಈವರೆಗೂ ಉದ್ಯೋಗವು ಕೊಡಿಸದೆ, ಇತ್ತ ಹಣವನ್ನೂ ಹಿಂದಿರುಗಿಸದೆ
ವಂಚಿಸಿದ್ದಾನೆ. ಅಲ್ಲದೆ ಮುಕ್ತಾರ್ ತನ್ನ ಮೊಬೈಲ್ ಫೋನ್ ಕೂಡಾ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಈ ಕುರಿತಂತೆ ಈ ಮೂವರು ಮುಕ್ತಾರ ಮನೆಗೆ ಹೋದ ವೇಳೆ ಮನೆಯವರೇ ಈತನ ಬಗ್ಗೆ ಬೈದಿದ್ದು, ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿ ನಾವು
ನಿಮಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ತಮ್ಮ ಹಣವನ್ನು ಹಿಂದಿರುಗಿಸಲು ಸಹಕಾರ ನೀಡುವಂತೆ
ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
