ಉಡುಪಿ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ: ಸಹಕಾರಿ ಸಪ್ತಾಹ ರದ್ದು : ಎಮ್ ಎನ್ ರಾಜೇಂದ್ರಕುಮಾರ್ – Vishwanews24
ಉಡುಪಿ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ: ಸಹಕಾರಿ ಸಪ್ತಾಹ ರದ್ದು : ಎಮ್ ಎನ್ ರಾಜೇಂದ್ರಕುಮಾರ್ – Vishwanews24
ಉಡುಪಿ: ಉಡುಪಿಯಲ್ಲಿ ಈ ತಿಂಗಳು ಹಮ್ಮಿಕೊಳ್ಳಲಾಗಿದ್ದ 68ನೇ ಸಹಕಾರಿ ಸಪ್ತಾಹ ರದ್ದಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹಿರಿಯ ಸಹಕಾರಿ ಧುರೀಣ ಎಮ್ ಎನ್ ರಾಜೇಂದ್ರಕುಮಾರ್ ಈ ವರ್ಷದ ಸಹಕಾರಿ ಸಪ್ತಾಹಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಧಿಡೀರ್ ಎಂದು ವಿಧಾನಪರಿಷತ್ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಸರ್ಕಾರಿ ಸಪ್ತಾಹವನ್ನು ಜನವರಿ ತಿಂಗಳಿಗೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಹಿರಿಯ ಸಹಕಾರಿಗಳಾದ ಜಯಕರ ಶೆಟ್ಟಿ ಇಂದ್ರಾಳಿ, ದೇವಿಪ್ರಸಾದ್ ಶೆಟ್ಟಿ, ಯಶ್ಪಾಲ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
