ಉಡುಪಿ: ವೀಕೆಂಡ್ ಕರ್ಫ್ಯೂ : ಅಗತ್ಯ ವಸ್ತುಗಳ ಖರೀದಿ ಮತ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆ ಸ್ಥಗಿತ : ಜಿಲ್ಲಾಧಿಕಾರಿ ಜಗದೀಶ್ -Vishwanews24
ಉಡುಪಿ: ವೀಕೆಂಡ್ ಕರ್ಫ್ಯೂ : ಅಗತ್ಯ ವಸ್ತುಗಳ ಖರೀದಿ ಮತ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆ ಸ್ಥಗಿತ : ಜಿಲ್ಲಾಧಿಕಾರಿ ಜಗದೀಶ್ -Vishwanews24
ಉಡುಪಿ: ಈ ಹಿಂದಿನ ಆದೇಶದಂತೆ ಶುಕ್ರವಾರ ಇಳಿ ಸಂಜೆ ಏಳು ಗಂಟೆಯಿಂದ ಸೋಮವಾರ ಬೆಳಿಗ್ಗೆ ಐದು ಗಂಟೆ ತನಕ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿ ಮತ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆ ಸ್ಥಗಿತಗೊಳ್ಳಲಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿ.ಸಿ., ನಾಳೆ ಬೆಳಿಗ್ಗೆ 6ರಿಂದ 2 ಗಂಟೆ ತನಕ ಅಗತ್ಯ ವಸ್ತು, ಹಾಲು ಮತ್ತಿತರ ಅಂಗಡಿಗಳು ತೆರೆಯಲಿವೆ. ಆಸ್ಪತ್ರೆ, ಮೆಡಿಕಲ್ ಎಂದಿನಂತೆ ಓಪನ್ ಇರಲಿವೆ. ಪೂರ್ವ ನಿಗದಿತ ಮದುವೆಗಳಿಗೆ 40 ಜನರಿಗೆ ಮಾತ್ರ ಅವಕಾಶವಿದೆ. ಅಂತ್ಯಸಂಸ್ಕಾರದಲ್ಲಿ ಐವರು ಭಾಗವಹಿಸಬಹುದು. ಉಳಿದಂತೆ ಹೋಟೆಲ್ ಗಳಲ್ಲಿ ಪಾರ್ಸೆಲ್ ಕೊಡಬಹುದು, ಹೋಮ್ ಡೆಲಿವರಿಗೂ ಅವಕಾಶವಿದೆ. ದೂರದೂರುಗಳಿಂದ ಟ್ರೈನ್, ಬಸ್ ಗಳಲ್ಲಿ ಬರುವವರಿಗೆ ಮನೆಗಳಿಗೆ ಹೋಗಲು ಅವಕಾಶವಿದೆ. ಆದರೆ, ಈ ಹಿಂದಿನ ಆದೇಶದಂತೆ ಫ್ಯಾಕ್ಟರಿ, ಕಾರ್ಖಾನೆಗಳು ಎರಡು ದಿನ ಮುಚ್ಚಲಿವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
