ಉಡುಪಿ ಸ್ಕಾರ್ಫ್ ವಿವಾದ : ಇದರ ಹಿಂದೆ ಕ್ಯಾಂಪಸ್ ಫ್ರಂಟ್ , ಎ ಎಸ್ ಯು ಐ ಯಂತಹ ಸಂಘಟನೆಗಳ ಷಡ್ಯಂತ್ರ ಇದೆ : ರಘುಪತಿ ಭಟ್  – Vishwanews24

Featured, ಉಡುಪಿ

ಡಿ. 30 ಕಾಪುವಿನಲ್ಲಿ SDPI ಮೂರು ಸ್ಥಾನ ಗೆದ್ದಿದೆ  , ಡಿ. 31 ಕ್ಕೆ ಮಕ್ಕಳು ಹಿಜಾಬ್ ಧರಿಸುವುದಕ್ಕೆ ಅವಕಾಶ ಕೇಳಿದ್ದಾರೆ ..

ಸರ್ಕಾರ ಅವಕಾಶ ಕೊಟ್ಟರೆ ನಮ್ಮ ವಿರೋಧ ಇಲ್ಲ..

ಉಡುಪಿ: ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಬ್ ವಿವಾದ ವಿಚಾರವಾಗಿ ಮಾತನಾಡಿದ ಶಾಸಕ ರಘುಪತಿ ಭಟ್ ,ಇದರ ಹಿಂದೆ ಕ್ಯಾಂಪಸ್ ಫ್ರಂಟ್ , ಎಎಸ್ ಯುಐ ಯಂತಹ ಸಂಘಟನೆಗಳ ಕುಮ್ಮಕ್ಕು ಇದೆ ಎಂದು ಆರೋಪಿಸಿದ್ದಾರೆ.

ಈಗಾಗಲೇ ಈ ಸಂಬಂಧ ಮುಸ್ಲಿಂ ಮುಖಂಡರ ಜೊತೆಗೆ ಎರಡು ಬಾರಿ ಮಾತುಕತೆ ನಡೆದಿದೆ. ಖಾಜಿಯವರು,ಮದ್ರಸಾ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದಾರೆ. ಉಡುಪಿ ಜಿಲ್ಲೆಯ ಮುಖಂಡರಿಗೆ ಈ ವಿಚಾರ ಮನವರಿಕೆ ಮಾಡಲಾಗಿದೆ ಎಂದರು.

27-01-2022 : ಇಂದಿನ ದಿನ ಭವಿಷ್ಯ -Vishwanews24

ಯಾವುದೇ ಸರ್ಕಾರಿ ಶಾಲೆಯಲ್ಲಿ ಹಿಜಾಬ್ ಧರಿಸಿ ಪಾಠ ಹೇಳುವುದಕ್ಕೆ ಅವಕಾಶ ಇಲ್ಲ ಎಂದ ಶಾಸಕರು, ಆರು ಮಕ್ಕಳಿಗೆ ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡಲು ಆಗುತ್ತಾ? ಆಗ ಉಳಿದ ಧರ್ಮದವರು ಕೇಸರಿ ಶಾಲಿಗೆ ಅವಕಾಶ ಕೇಳುತ್ತಾರೆ. ಶಾಲೆ ಶಿಕ್ಷಣ ಕೇಂದ್ರವಾಗದೆ ಧಾರ್ಮಿಕ ಸಂಘರ್ಷದ ಕೇಂದ್ರ ವಾಗುತ್ತದೆ.ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ.ಸರ್ಕಾರ ಅವಕಾಶ ಕೊಟ್ಟರೆ ನಮ್ಮ ವಿರೋಧ ಇಲ್ಲ ಎಂದು ಹೇಳಿದ್ದಾರೆ.

ಅವರಿಗೆ ಅನ್ ಲೈನ್ ಕ್ಲಾಸ್ ಗೆ ಶಾಲಾ ಆಡಳಿತ ಮಂಡಳಿ ಅವಕಾಶ ನೀಡಿದೆ ಎಂದ ಶಾಸಕರು, ಡಿಸೆಂಬರ್ 30 ಕಾಪುವಿನಲ್ಲಿ ಎಸ್ ಡಿ ಪಿ ಐ ಮೂರು ಸ್ಥಾನ ಗೆದ್ದಿದೆ. ಅದಾಗಿ ,ಡಿ. 31 ಕ್ಕೆ ಮಕ್ಕಳು ಹಿಜಾಬ್ ಧರಿಸುವುದಕ್ಕೆ ಅವಕಾಶ ಕೇಳಿದ್ದಾರೆ.ಅಲ್ಲಿಯವರೆಗೆ ಮಕ್ಕಳಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಇದರ ಹಿಂದೆ ಕೆಲವು ಸಂಘ ಟನೆಗಳ ಷಡ್ಯಂತ್ರ ಇದೆ ಎಂದು ಹೇಳಿದ್ದಾರೆ.

ಸಿಎಂ ಇಬ್ರಾಹಿಂ ಜೆಡಿಎಸ್​​ಗೆ ಬರುವುದಾದರೆ ಅವರನ್ನು ಸ್ವಾಗತ್ತೇನೆ : ಹೆಚ್​.ಡಿ. ಕುಮಾರಸ್ವಾಮಿ – Vishwanews24

Leave a Reply