ಉಳಿಯಾರಗೊಳಿ-ದಂಡತೀರ್ಥ ಸರ್ಕಾರದ ಆಟದ ಮೈದಾನಕ್ಕೆ “ಸಾರ್ವಜನಿಕ ಆಟದ ಮೈದಾನ” ಎಂದು ನಾಮಫಲಕಕಕ್ಕೆ ಪುರಸಭಾ ಸದಸ್ಯ ಪ್ರದೀಪ್ ಯು ಆಗ್ರಹ.vishwanews24

Featured, ಉಡುಪಿ

ಉಳಿಯಾರಗೊಳಿ-ದಂಡತೀರ್ಥ ಸರ್ಕಾರದ ಆಟದ ಮೈದಾನಕ್ಕೆ “ಸಾರ್ವಜನಿಕ ಆಟದ ಮೈದಾನ” ಎಂದು ನಾಮಫಲಕಕಕ್ಕೆ ಪುರಸಭಾ ಸದಸ್ಯ ಪ್ರದೀಪ್ ಯು ಆಗ್ರಹ.

ಕಾಪು: ಪುರಸಭಾ ವ್ಯಾಪ್ತಿಯಲ್ಲಿ ಬರುವ ದಂಡತೀರ್ಥ ಉಳಿಯಾರಗೊಳಿಯಲ್ಲಿರುವ ಆಟದ ಮೈದಾನ ಸರ್ಕಾರದ ಅಧೀನದಲ್ಲಿರುವುದರಿಂದ ಮತ್ತು ಪಹಣಿ ಪತ್ರದಲ್ಲಿ ಕೂಡ ಸರ್ಕಾರಿ ಎಂಬುದು ಮುದ್ರಣವಿರುವುದರಿಂದ ಕಾಪು ಪುರಸಭೆಯ ವತಿಯಿಂದ ಸಾರ್ವಜನಿಕ ಆಟದ ಮೈದಾನ ಎಂಬ ನಾಮಕರಣ ಮಾಡಬೇಕೆಂದು ನಾಮನಿರ್ದೇಶನ ಸದಸ್ಯ ಪ್ರದೀಪ್ ಯು ಪುರಸಭಾ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರನ್ನು ಬುಧವಾರ ನಡೆದ ಕಾಪು ಪುರಸಭಾ ಸಮಾನ್ಯ ಸಭೆಯಲ್ಲಿ ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ವೆಂಕಟೇಶ ನಾವುಡ” ಸಂಬಂಧಪಟ್ಟ ಇಲಾಖೆಯ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.