ಎರಡನೇ ಬಾರಿ ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಶ್ರೀ ಯೋಗೀಶ್ ವಿ ಶೆಟ್ಟಿ  ಆಯ್ಕೆ -Vishwanews24

Featured, ಉಡುಪಿ

ಎರಡನೇ ಬಾರಿ ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಶ್ರೀ ಯೋಗೀಶ್ ವಿ ಶೆಟ್ಟಿ  ಆಯ್ಕೆ -Vishwanews24

ಮಾಜಿ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಎಚ್ ಡಿ ದೇವೇಗೌಡ,ಮತ್ತು ಮಾಜಿ ಮುಖ್ಯಮಂತ್ರಿ ಶ್ರೀ ಎಚ್ ಡಿ ಕುಮಾರಸ್ವಾಮಿಯವರ, ಆತ್ಮೀಯತೆ ಮತ್ತು ವಿಶ್ವಾಸದ ನಾಯಕನಾಗಿ ಹೊರಹೊಮ್ಮಿದ, ಅವರ ಶಿಫಾರಸು ಮತ್ತು ರಾಜ್ಯಾಧ್ಯಕ್ಷರಾದ ಶ್ರೀ ಹೆಚ್ ಕೆ ಕುಮಾರಸ್ವಾಮಿ, ವೀಕ್ಷಕರ ಕಮಿಟಿಯ ಮುಖ್ಯ ಸಂಚಾಲಕರು ಮತ್ತು ಕಮಿಟಿ ಸದಸ್ಯರ ಶಿಫಾರಸ್ಸಿನ ಮೇರೆಗೆ ಕಳೆದ 27 ವರ್ಷದಿಂದ ಜನತಾ ಪರಿವಾರದಲ್ಲಿ ಗುರುತಿಸಿಕೊಂಡು, 2016ರಿಂದ ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಯೋಗೀಶ ವಿ ಶೆಟ್ಟಿ ಯವರನ್ನು ಉಡುಪಿ ಜಿಲ್ಲಾಧ್ಯಕ್ಷರನ್ನಾಗಿ 2ನೇ ಬಾರಿ ಪುನರಾಯ್ಕೆ ಮಾಡಿರುತ್ತಾರೆ ಎಂದು ರಾಜ್ಯಾಧ್ಯಕ್ಷರು ಆದೇಶ ಹೊರಡಿಸಿರುತ್ತಾರೆ.