ಒಂದಲ್ಲಾ ಒಂದು ದಿನ ಬಿಜೆಪಿಯವರು ಚಿದಂಬರ್ ಅವರ ಅಕ್ರಮಗಳನ್ನು ಬಯಲಿಗೆ ತರುತ್ತಾರೆ : ನಿಜವಾದ ಜನಾರ್ಧನ ಪೂಜಾರಿ ಭವಿಷ್ಯ : (ವಿಡಿಯೋ ವೈರಲ್) -Vishwanews24
ಮಂಗಳೂರು : ಬಂಧನಕ್ಕೊಳಗಾಗಿದ್ದ ಕೇಂದ್ರ ಮಾಜಿ ಸಚಿವ ಪಿ. ಚಿದಂಬರ ಅವರ ಹಗರಣಗಳ ಬಗ್ಗೆ ಕಾಂಗ್ರೇಸ್ ಹಿರಿಯ ಮುಖಂಡ ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ಅವರು ಹೇಳಿದ್ದ ಭವಿಷ್ಯ ಈಗ ನಿಜವಾಗಿದೆ.ಈ ಕುರಿತ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2018ರ ವಿಧಾನಸಭೆ ಚನಾವಣೆ ಸಂದರ್ಭದಲ್ಲಿ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೇಸ್ ನ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಪಿ. ಚಿದಂಬರ ಅವರ ಅಕ್ರಮಗಳ ಬಗ್ಗೆ ಮಾತನಾಡಿದ್ದರು, ಚಿದಂಬರ ಅವರ ಏನು ಮಾಡಿದ್ದಾರೆ ಎಂದು ಬಿಜೆಪಿ ಅವರಿಗೆ ಹೇಳಿದರೆ ಕಾಂಗ್ರೇಸ್ ಸರ್ವನಾಶವಾಗುತ್ತದೆ. ನೋಡಿ ಒಂದಲ್ಲಾ ಒಂದು ದಿನ ಬಿಜೆಪಿಯವರು ಚಿದಂಬರ ಅವರ ಅಕ್ರಮಗಳನ್ನು ಬಯಲಿಗೆ ತರುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

ಜಾಹಿರಾತು
ಐ ಎನ್ ಎಕ್ಸ್ ಅವ್ಯವಹಾರದಲ್ಲಿ ಚಿದಂಬರಂ ರವರನ್ನು ಸಿಬಿಐ ಆ.21ರಂದು ಬಂಧಿಸಿತ್ತು . ಮನಮೋಹನ್ ಸಿಂಗ್ ಸರಕಾರದಲ್ಲಿ ವಿತ್ತ ಸಚಿವರಾಗಿ ಕಾರ್ಯ ನಿರ್ವಹಿಸಿದ ಚಿದಂಬರಂ ತನ್ನ ಪುತ್ರ ಕಾರ್ತಿ ಚಿದಂಬರಂ ಮೂಲಕ ಐ ಏನ್ ಎಕ್ಸ್ ಸಂಸ್ಥೆಗೆ ವಿದೇಶಿ ಬಂಡವಾಳ ಹರಿದು ಬರಲು ಬೇಕಾದ ಕಾನೂನು ತೊಡಕುಗಳನ್ನು ನಿವಾರಿಸಿದ್ದಾರೆ ಇದಕ್ಕಾಗಿ ಅವರು ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಚಿದಂಬರಂ ಮೇಲೆ ಸಿಬಿಐ ವಿಧಿಸಿದೆ.
ಕಾಂಗ್ರೇಸ್ ನ ಹಿರಿಯ ನಾಯಕ ಪೂಜಾರಿ ಅವರು ಚಿದಂಬರ ಅವರ ಬಗ್ಗೆ ಹೇಳಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೂಜಾರಿ ಅವರ ಭವಿಷ್ಯ ಇಂದು ನಿಜವಾಗಿದೆ ಎಂದು ಪ್ರತಿಕ್ರಿಯೆಗಳು ಬರುತ್ತಿದೆ.
