ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಚಿತ್ರ ನಟ ಶ್ರೀಮುರಳಿ ಭೇಟಿ – vishwanews24

Featured, ದಕ್ಷಿಣ ಕನ್ನಡ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಚಿತ್ರ ನಟ ಶ್ರೀಮುರಳಿ ಭೇಟಿ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಚಿತ್ರ ನಟ ಶ್ರೀಮುರಳಿ ಭೇಟಿ ನೀಡಿದರು. ಕ್ಷೇತ್ರದ ವತಿಯಿಂದ ಮುರಳಿ ಅವರನ್ನು ವೆಂಕಟರಮಣ ಆಸ್ರಣ್ಣ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಗೌರವಿಸಿದರು.

ನಂತರ ಮಾಧ್ಯಮದ ಜೊತೆ ಶ್ರೀಮುರಳಿ ಮಾತನಾಡಿ, ನವರಾತ್ರಿ ಶುಭ ಸಂದರ್ಭದಲ್ಲಿ ಕರಾವಳಿಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇನೆ, ನಾನು ಬಾಲ್ಯದಲ್ಲಿ ಕಟೀಲಿಗೆ ಭೇಟಿ ನೀಡಿದ್ದೇನೆ ಇದೀಗ ಮತ್ತೆ ಅವಕಾಶ ಸಿಕ್ಕಿದೆ.

ಭಗೀರ ಚಿತ್ರ ಬಿಡುಗಡೆಯಾಗುತ್ತದೆ, ಕರಾವಳಿಯ ನಟರು ಕನ್ನಡ ಚಿತ್ರರಂಗದಲ್ಲಿ ಮಿನುಗುತ್ತಿದ್ದಾರೆ. ಈ ಬಗ್ಗೆ ಅತೀವ ಸಂತಸವಿದೆ, ತುಳು ಚಿತ್ರರಂಗ ಬೆಳೆಯುತ್ತಿದೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಕನ್ನಡ ಚಿತ್ರರಂಗದಂತೆ ತುಳು ಚಿತ್ರರಂಗವೂ ಮುಂದುವರಿಯಬೇಕು ಎಂದರು.

ಈ ಸಂದರ್ಭ ಅಭಿಲಾಷ್ ಶೆಟ್ಟಿ ಕಟೀಲು, ವಿಕೇಶ್ ಕೋಟ್ಯಾನ್ ಜಲ್ಲಿಗುಡ್ಡೆ, ಕಾರ್ತಿಕ್ ರಾವ್, ಮತ್ತಿತರರು ಇದ್ದರು.

Leave a Reply