ಕನ್ನರ್ಪಾಡಿ ಜಯ ದುರ್ಗಾಪರಮೇಶ್ವರಿ ದೇವಸ್ಥಾನ ,ಉಡುಪಿ : ಜನವರಿ22 ರಂದು ಕೊಡಿಮರ ಸಮರ್ಪಣೆ ಮೆರವಣಿಗೆ.
ಕನ್ನರ್ಪಾಡಿ ಜಯ ದುರ್ಗಾಪರಮೇಶ್ವರಿ ದೇವಸ್ಥಾನ ,ಉಡುಪಿ : ಜನವರಿ22 ರಂದು ಕೊಡಿಮರ ಸಮರ್ಪಣೆ ಮೆರವಣಿಗೆ.
ಉಡುಪಿ: ಉಡುಪಿ ಕನ್ನರ್ಪಾಡಿಯ ಕಡೆಕಾರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯ ಅಂಗವಾದ ಕೊಡಿಮರ ಸಮರ್ಪಣೆ ಕಾರ್ಯಕ್ರಮವು ಜನವರಿ 22 ರ ಬುಧವಾರ ನಡೆಯಲಿದೆ ಎಂದು ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ.ಕೃಷ್ಣ ಮೂರ್ತಿ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬುಧವಾರ 22 ರಂದು ಉಡುಪಿಯ ಜೋಡುಕಟ್ಟೆಯಿಂದ ಬೃಹತ್ ಶೋಭಾಯಾತ್ರೆಯು ದೇಗುಲಕ್ಕೆ ತಲುಪಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎನ್.ಮುರಳೀಧರ ಬಲ್ಲಾಳ,ದಿನೇಶ ಬೀಡು,ಸುಕುಮಾರ್,ನವೀನ್ ಶೆಟ್ಟಿ,ಗುರುರಾಜ ಉಪಾಧ್ಯಾಯ ಉಪಸ್ಥಿತಿತರಿದ್ದರು.
