ಕರಾವಳಿಯಲ್ಲಿ ಅಬ್ಬರಿಸಲಿದೆ ‘ಕ್ಯಾರ್’ ಚಂಡಮಾರುತ -Vishwanews24
ಮಂಗಳೂರು: ಕರಾವಳಿಯಲ್ಲಿ ‘ಕ್ಯಾರ್’ ಚಂಡಮಾರುತ ಅಬ್ಬರಿಸಲಿದೆ. ಮುಂದಿನ ಮೂರು ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಕ್ಯಾರ್ ಚಂಡ ಮಾರುತ ಉದ್ಭವಿಸಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಸಿಲಾಗಿದೆ.
ಅರಬ್ಭಿ ಸಮುದ್ರ ಪೂರ್ವ ಮಧ್ಯಭಾಗದಲ್ಲಿ ಹುಟ್ಟಿದ ಚಂಡಮಾರುತಕ್ಕೆ “ಕ್ಯಾರ್ ” ಎಂದು ಹೆಸರಿಸಲಾಗಿದೆ. ಅ.25ರವರೆಗೆ ಪೂರ್ವ ಮಧ್ಯದ ಮೂಲಕ ಪೂರ್ವ- ಈಶಾನ್ಯದತ್ತ ಚಲಿಸಲಿದ್ದು, ಆ ನಂತರ ಪಶ್ಚಿಮ ಈಶಾನ್ಯದತ್ತ ಸಾಗಿ ಓಮನ್ನತ್ತ ಅಪ್ಪಳಿಸುವ ಸಾಧ್ಯತೆಯಿದೆ. ಇದರ ಪರಿಣಾಮ ಮುಂದಿನ ಎರಡು ದಿನ ಕರ್ನಾಟಕ ಕರಾವಳಿ, ಕೊಂಕಣ ಮತ್ತು ಗೋವಾ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪೂರ್ವ ಮಧ್ಯ ಅರಬ್ಬಿ ಸಮುದ್ರದ ಮೇಲಿರುವ ಗುರುತಿಸಲಾದ ಕಡಿಮೆ ಒತ್ತಡದ ಪ್ರದೇಶವು ಯಾವುದೇ ಸಮಯದಲ್ಲಿ ಶೀಘ್ರದಲ್ಲೇ ಖಿನ್ನತೆಗೆ ತೀವ್ರಗೊಳ್ಳುತ್ತದೆ. ನಾಳೆಯ ಹೊತ್ತಿಗೆ, ಈ ವ್ಯವಸ್ಥೆಯು ವಾಯುವ್ಯ ದಿಕ್ಕಿನಲ್ಲಿ ಚಲಿಸಲು ಪ್ರಾರಂಭಿಸುತ್ತದೆ ಮತ್ತು ಸೈಕ್ಲೋನ್ಗೆ ಮತ್ತಷ್ಟು ತೀವ್ರಗೊಳ್ಳುತ್ತದೆ. ಈ ಚಂಡಮಾರುತವನ್ನು ‘ಕ್ಯಾರ್’ ಎಂದು ಕರೆಯಲಾಗುತ್ತದೆ.
