ಕರಾವಳಿಯಲ್ಲಿ ಮತ್ತೆ ಝಳಪಿಸಿದ ತಲವಾರು: ಮಜೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನ ಕೊಲೆಯತ್ನ ದುಷ್ಕರ್ಮಿಗಳ ಬಂಧನ-vishwanews24

Featured, ಉಡುಪಿ

ಕರಾವಳಿಯಲ್ಲಿ ಮತ್ತೆ ಝಳಪಿಸಿದ ತಲವಾರು: ಮಜೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನ ಕೊಲೆಯತ್ನ ದುಷ್ಕರ್ಮಿಗಳ ಬಂಧನ

ಕಾಪು: ಮಜೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಶೆಟ್ಟಿ ಹೇರೂರು ಇವರ ಕೊಲೆ ಯತ್ನ ನಡೆದ ಬಗ್ಗೆ ವರದಿಯಾಗಿದೆ.

ಗಣೇಶ್ ಶೆಟ್ಟಿ ಹೆರೂರು ಮಜೂರು ಗ್ರಾಮ ಪಂಚಾಯತ್ ಮಾಜಿ        ಅಧ್ಯಕ್ಷ

ಬಂಟಕಲ್ಲು ಹೇರೂರಿನಲ್ಲಿ ತನ್ನ ಅಂಗಡಿ ಬಾಗಿಲು ಮುಚ್ಚುವ ಸಮಯದಲ್ಲಿ ಸ್ಥಳಕಾಗಮಿಸಿದ ತಲವಾರು ಸಮೇತವಾಗಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗಣೇಶ್ ಶೆಟ್ಟಿಯ ಮೇಲೆ ಹಲ್ಲೆ ನಡೆಸಿ ಕೊಲೆಯತ್ನ ನಡೆಸಲು ಪ್ರಯತ್ನಿಸಿದರು ಈ ಸಮಯದಲ್ಲಿ ಬೊಬ್ಬೆ ಹಾಕಿದ ಶೆಟ್ಟಿ ಪಾರಾಗಲು ಯತ್ನಿಸಿದರು ಈ ಸಂಧರ್ಭದಲ್ಲಿಬೊಬ್ಬೆ ಕೇಳಿದ ಸ್ಥಳೀಯರು ಜಮಾವಣೆಯಾಗಿ ದುಷ್ಕರ್ಮಿಗಳಿಗೆ ಗೂಸ ನೀಡಿದ್ದಾರೆ.

        ಕೊಲೆ ಯತ್ನ ನಡೆಸಲು ಬಂದ ದುಷ್ಕರ್ಮಿಗಳು

ಗಣೇಶ್ ಶೆಟ್ಟಿ ಹೆರೂರು ಮಜೂರು ಗ್ರಾಮ ಪಂಚಾಯತ್ ಮೂರು ಅವಧಿಯ ಸದಸ್ಯರಾಗಿ ಒಂದು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.


ಬೈಕಿನಲ್ಲಿ ಬಂದ ದುಷ್ಕರ್ಮಿಗಳನ್ನು ಸ್ಥಳೀಯರಾದ ಸ್ಟೀವನ್ ಮತ್ತು ಚರಣ್ ಎಂಬವರನ್ನು ಶಿರ್ವ ಪೋಲಿಸರು ಬಂಧಿಸಿದ್ದು ಪ್ರಕರಣ ದಾಖಲಾಗಿದೆ.

        ಕೃತ್ಯಕ್ಕೆ ಬಳಸಲಾದ ಬೈಕು ಮತ್ತು                        ‌  ಮಾರಕಾಯುಧ

ಕ್ರೈಮ್ ಬ್ಯೂರೋ ವಿಶ್ವನ್ಯೂಸ್24