ಕರುನಾಡಿನಲ್ಲಿ ಸೇವೆ ಸಲ್ಲಿಸಲು ದೊರೆತ ಅವಕಾಶವನ್ನು ನನ್ನ ಭಾಗ್ಯ ಎಂದೇ ಭಾವಿಸಿದ್ದೇನೆ : ಐಪಿಎಸ್ ಡಿ. ರೂಪಾ -Vishwanews24
ಬೆಂಗಳೂರು : ‘ಜೀವನದಲ್ಲಿ ಕಷ್ಟಪಡದೇ ಯಾವ ಕಾರ್ಯಸಾಧನೆಯೂ ಆಗುವುದಿಲ್ಲ. ಇದಕ್ಕಾಗಿ ಎಲ್ಲರೂ ಶ್ರಮ ಪಡಬೇಕು. ತನ್ಮೂಲಕ ಸಾರ್ಥಕತೆ ಪಡೆಯಬೇಕು’ ಎಂದು ಎಂದು ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಅಭಿಪ್ರಾಯಪಟ್ಟರು.
ಸೋಮವಾರ ಸಾಗರೋತ್ತರ ಕನ್ನಡಿಗರು ಸಂಘಟನೆ ಸೋಮವಾರ ಆಯೋಜಿಸಿದ ಸಾಗರೋತ್ತರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿ. ರೂಪಾ ಅವರು, ‘ನನ್ನ ಜೀವನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿದ್ದೇನೆ. ಸರ್ಕಾರ ನನಗೆ ವಹಿಸಿದ ಕಾರ್ಯವನ್ನು ಅಚ್ಚುಕಟ್ಟಾಗಿ ಯಾವುದೇ ಆಮಿಷಕ್ಕೆ ಒಳಗಾಗದೆ ಜವಾಬ್ದಾರಿ ಕೆಲಸವನ್ನು ನಿರ್ವಹಿಸಿದ್ದೇನೆ’ ಎಂದು ಹೇಳಿದರು.
‘ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ, ನೊಂದಿರುವ ಎಷ್ಟೋ ಜನ ನನ್ನ ಹತ್ತಿರ ಬಂದು ತಮ್ಮ ಕಷ್ಟಹೇಳಿದಾಗ ಸಹಕಾರ ಮಾಡಿದ್ದೇನೆ. ಕರುನಾಡಿನಲ್ಲಿ ಸೇವೆ ಸಲ್ಲಿಸಲು ದೊರೆತ ಅವಕಾಶವನ್ನು ನನ್ನ ಭಾಗ್ಯ ಎಂದೇ ಭಾವಿಸಿದ್ದೇನೆ’ ಎಂದರು.
‘ಇನ್ನು ಸಾಗರೋತ್ತರ ಕನ್ನಡಿಗರು ವಿಶ್ವದ ಎಲ್ಲಾ ದೇಶಗಳ ಕನ್ನಡಿಗರನ್ನು ಒಗ್ಗೂಡಿಸಿ ಇಂತಹ ವಿನೂತನ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಹೆಮ್ಮೆಯಿದೆ’ ಎಂದು ಹೇಳಿದರು.
