ಕರ್ನಾಟಕ ಬಂದ್ ಬೆಂಬಲಿಸಿ ಕಾಪುವಿನಲ್ಲಿ ಬಿಜೆಪಿ ಪ್ರತಿಭಟನೆ,. ಕಾಂಗ್ರೇಸ್ ಮತ್ತು ಜೆಡಿಎಸ್ ನ ಅನೈತಿಕ ಸಂಬಂಧದ ಪರಮಾವಧಿ ಎಂದು ಲೇವಡಿ.
ಕಾಪು: ರಾಜ್ಯ ಬಿಜೆಪಿ ರೈತರ ಸಾಲ ಮನ್ನ ಆಗ್ರಹಿಸಿ ಇಂದು ಕರ್ನಾಟಕ ಬಂದ್ ಕೊಟ್ಟಿರುವ ಹಿನ್ನಲೆಯಲ್ಲಿ ಬಂದ್ ಬೆಂಬಲಿಸಿ ಕಾಪುವಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ” ಚುನಾವಣಾ ಪೂರ್ವಭಾವಿಯಾಗಿ ನೀಡಿದ ಪ್ರಣಾಲಿಕೆ ಪ್ರಕಾರ ಕುಮಾರಸ್ವಾಮಿ ನಡೆಯುತ್ತಿಲ್ಲ,24ಗಂಟೆಯಲ್ಲಿ ಸಾಲಮನ್ನ ಮಾಡುತ್ತೆನೆಂದು ಹೇಳಿದ ಇವರು ಈಗ ಮಾತಿನ ವರಸೆ ಬದಲಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಮತ್ತು ಕುಮಾರಸ್ವಾಮಿ ಕಾಂಗ್ರೇಸ್ ನ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ತದನಂತರ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಮಾತನಾಡುತ್ತ” ರಾಜ್ಯದಲ್ಲಿ ಜನರನ್ನ ಕೊಳ್ಳೆ ಹೊಡೆಯುವ ಪಕ್ಷಗಳು ಸರ್ಕಾರ ನಡೆಸುತ್ತಿದೆ , ಬಡವರ ರೈತರ ಬಗ್ಗೆ ಚೂರು ಕರುಣೆಯಿಲ್ಲದಂತೆ ವರ್ತಿಸುತ್ತಿದ್ದು ಇದು ಕಾಂಗ್ರೇಸ್ ಮತ್ತು ಜೆಡಿಎಸ್ ನ ಅನೈತಿಕ ಸಂಬಂಧದ ಪರಮಾವಧಿ , ರಾಜ್ಯದ ಜನರ ಮುಲಾಜಿನಲಿಲ್ಲ ಕಾಂಗ್ರೆಸ್ ನ ಮುಲಾಜಿನಲ್ಲಿದ್ದೆನೆಂದು ರಾಜ್ಯದ ಮುಖ್ಯಮಂತ್ರಿಗೆ ಹೇಳಲು ನಾಚಿಕೆಯಾಗ್ಬೇಕು ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ಕಟಪಾಡಿ ಶಂಕರ ಪೂಜಾರಿ,ಮಿಥುನ್ ಹೆಗ್ಡೆ,ಗಂಗಾಧರ್ ಸುವರ್ಣ, ಯುವಮೋರ್ಚ ಅಧ್ಯಕ್ಷ ಪ್ರವೀಣ್ ಪೂಜಾರಿ,ಶಿಲ್ಪಾ ಜಿ ಸುವರ್ಣ, ಕೇಸರಿ ಉಚ್ಚಿಲ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.


2 comments
Karnataka CM Kumara Swamy says “I am not owning gratitude to the six crore people of the state. I am indebted to the Congress”.
https://www.deccanherald.com/state/i-am-indebted-cong-not-people-state-kumaraswamy-672002.html
ನಮಗೆ ಇನ್ನೂ ಇಂತಹ ರಾಜಕಾರಣಿಗಳು, ಮುಖ್ಯಮಂತ್ರಿಗಳು ಬೇಕಾ?
Whatever the government, whichever the parties please think about the state and our national images, international rankings, economy at global level. Such message from chief minister impact people’s state of mind or feelings. Please focus on upholding the values of our state and county. Work on optimizing basic infrastructure, employment, women’s safety, etc., All states must allign with central Modi’s government and experience it in real sense.
Shame on Kumaraswamy
Comments are closed.