ಕಲಬುರ್ಗಿ:  ಮುಸ್ಲೀಮರು ಕೆತ್ತಿದ ವಿಗ್ರಹ ಪೂಜೆಗೆ ಯೋಗ್ಯವಲ್ಲ:  ಆಂದೋಲ ಸಿದ್ಧಲಿಂಗ ಸ್ವಾಮೀಜಿ – VIshwanews24

Featured, ರಾಜ್ಯ ನ್ಯೂಸ್

ಏಪ್ರಿಲ್ 15ರಿಂದ ರಾಜ್ಯಾಧ್ಯಂತ ಮುಸ್ಲೀಮರು ಕೆತ್ತಿದಂತ ವಿಗ್ರಹ ಖರೀದಿಸದಂತೆ ಅಭಿಯಾನ ಆರಂಭ

ಕಲಬುರ್ಗಿ: ಮುಸ್ಲೀಮರು ಕೆತ್ತಿದಂತ ವಿಗ್ರಹ ಪೂಜೆಗೆ ಯೋಗ್ಯವಲ್ಲ. ಆ ವಿಗ್ರಹಗಳನ್ನು ನಿಷೇಧಿಸಬೇಕು ಎಂಬುದಾಗಿ ಈಗ ಆಂದೋಲಾ ಸಿದ್ಧಲಿಂಗ ಸ್ವಾಮೀಜಿಯಿಂದ ಮತ್ತೊಂದು ಆಂದೋಲನವನ್ನು ಆರಂಭಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಈಗ ಮುಸ್ಲೀಂ ಸಮುದಾಯದವರು ಕೆತ್ತಿರೋ ವಿಗ್ರಹ ನಿಷೇಧಿಸುವಂತೆ ಮತ್ತೊಂದು ಅಭಿಯಾನ ಆರಂಭಗೊಂಡಿದೆ.

ರಾಜ್ಯದಲ್ಲಿ ಹಿಜಾಬ್, ವ್ಯಾಪಾರ ದಂಗಲ್, ಹಲಾಲ್ ಮಾಂಸ ನಿಷೇಧದ ಬಳಿಕ, ಈಗ ಮುಸ್ಲೀಂ ಸಮುದಾಯದವರು ಕೆತ್ತಿರುವಂತ ವಿಗ್ರಹ ನಿಷೇಧಿಸುವಂತ ಅಭಿಯಾನ ಆರೋಂಭಗೊಂಡಿದೆ. ಅವರು ಕೆತ್ತಿದಂತ ವಿಗ್ರಹ ಪೂಜೆಗೆ ಯೋಗ್ಯವಲ್ಲ. ವಿಗ್ರಹ ಕೆತ್ತೋರು ಹಿಂದು ಸಮುದಾಯದವರು ಎಂಬುದಾಗಿ ಹೇಳಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವಂತ ಶ್ರೀರಾಮ ಸೇನೆಯ ಅಧ್ಯಕ್ಷ ಆಂದೋಲಾ ಸಿದ್ದಲಿಂಗಸ್ವಾಮೀಯಿಯವರು, ಮುಸ್ಲೀಮರು ಕೆತ್ತಿದ ವಿಗ್ರಹ ಪೂಜೆಗೆ ಯೋಗ್ಯವಲ್ಲ. ಮುಸ್ಲೀಮರು ವಿಗ್ರಹ ಕೆತ್ತನೆ ಬಗ್ಗೆ ಮಾಹಿತಿ ನೀಡಿದ್ದೇ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಎಂದು ಹೇಳಿದ್ದಾರೆ.

ರಾಜ್ಯಾಧ್ಯಂತ ಏಪ್ರಿಲ್ 15ರಿಂದ ಮುಸ್ಲೀಮರು ಕೆತ್ತಿದಂತ ವಿಗ್ರಹ ಖರೀದಿಸದಂತೆ ಅಭಿಯಾನ ಆರಂಭಿಸಲಾಗುತ್ತದೆ. ಅವರಿಂದ ಪೂಜಾ ಸಾಮಗ್ರಿಯನ್ನು ಖರೀದಿಸದಂತೆ ಅಭಿಯಾನ ಶುರು ಮಾಡಲಾಗುತ್ತದೆ. ರಾಜ್ಯದ ಮನೆ ಮನೆಗೂ ತೆರಲಿ ಜಾಗೃತಿ ಮೂಡಿಸುವಂತ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಂಗಳೂರು: ನಿಯಮ ಮೀರಿ ಧ್ವನಿವರ್ಧಕ ಬಳಕೆ : 1001 ಸ್ಥಳಗಳಿಗೆ ನೋಟೀಸು : ಕಮಿಷನರ್‌ – Vishwanews24

Leave a Reply