ಕಾಂಗ್ರೇಸ್ ನೇತೃತ್ವದಲ್ಲಿ ಬೃಹತ್ ಪಂಜಿನ ಮೆರವಣಿಗೆ

Featured, ಉಡುಪಿ

ಕಾಪು :ಮುದರಂಗಡಿ ಪೇಟೆಯಲ್ಲಿ ಸನ್ಮಾನ್ಯ ಡೇವಿಡ್ ಡಿಸೋಜರವರ ನೇತ್ರತ್ವದಲ್ಲಿ ಸುಧೀರ್ ರಾವ್ ಸಾಂತೂರು,ಗುರುರಾಜ್ ಪ್ರಭು ಕಾಂಜರಕಟ್ಟೆ,ಯೋಗೀಶ್ ಇನ್ನಾ ,ಇವರ ಮುಂದಾಳತ್ವದಲ್ಲಿ , ಶ್ರಿಯುತ ಮುನಿಯಾಲು ಉದಯಕುಮಾರ ಶೆಟ್ಟಿ‌ಯವರಿಂದ ಉದ್ಘಾಟನೆಗೊಂಡು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ,ದೀಪಕ್ ಕೋಟ್ಯಾನ್, ಹಾಗೂ ಇತರ ಮುಖಂಡರ ಉಪಸ್ಥಿತಿ ಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ಸ್ಮರಣೆಗಾಗಿ ಪಂಜಿನ ಮೆರವಣಿಗೆ ನಡೆಯಿತು.
ದಿಕ್ಸೂಚಿ ಭಾ಼ಷಣಕಾರರಾಗಿ ಅಮ್ರತ್ ಶೆಣೈಯವರು ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಕಾಂಗ್ರೆಸ್ನ ಕೊಡುಗೆಯನ್ನು ಎಳೆಎಳೆಯಾಗಿ ವಿವರಿಸಿದರು.ಬೆಳಿಗ್ಗೆಯಿಂದ ಬೆಂಬಿಡದೆ ಸುರಿಯುತಿದ್ದ ಮಳೆಯು ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯನ್ನು ಮಾಡದಿದ್ದದ್ದು ವಿಶೇಷವಾಗಿತ್ತು ಮುದರಂಗಡಿ ವಿದ್ಯಾನಗರದ ದುರ್ಗಾಮಂದಿರದಲ್ಲಿ ಪ್ರಾರ್ಥನೆ ಪೂಜೆಯನ್ನು ಮಾಡಿ ಪಂಜನ್ನು ಹಿಡಿದುಕೊಂಡು ನೂರಾರು ಯುವಕರು ಭಾರತಮಾತೆಗೆ ಜೈಕಾರ ಕೂಗುತ್ತಾ ಸಾಗಿದ ಮೆರವಣಿಗೆ ಮುದರಂಗಡಿಯ ಗಣಪತಿಕಟ್ಟೆಯ ಬಳಿಯ ವೇದಿಕೆಯಲ್ಲಿ ಶ್ರಿ ಉದಯಕುಮಾರ್ ಶೆಟ್ಟಿ ಮುನಿಯಾಲು‌ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು,ದಿಕ್ಸೂಚಿ ಭಾಷಣ ದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿತು.