ಕಾಪು: ಉಚಿತ ಮೆಡಿಸಿನ್- ಧನಸಹಾಯ ಪಡಿತರ ಕಿಟ್ ವಿತರಣೆ- ಸಮಾಜ ಸೇವಾ ವೇದಿಕೆ ಕಳತ್ತೂರು-ಕಾಪು ಹಾಗೂ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಆಶ್ರಯ-vishwanews24
ಕಾಪು: ಉಚಿತ ಮೆಡಿಸಿನ್- ಧನಸಹಾಯ ಪಡಿತರ ಕಿಟ್ ವಿತರಣೆ- ಸಮಾಜ ಸೇವಾ ವೇದಿಕೆ ಕಳತ್ತೂರು-ಕಾಪು ಹಾಗೂ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಆಶ್ರಯ-vishwanews24
ಕಾಪು: ಸಮಾಜ ಸೇವಾ ವೇದಿಕೆ ಕಳತ್ತೂರು-ಕಾಪು ಆಶ್ರಯದಲ್ಲಿ ಹಾಗೂ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ವತಿಯಿಂದ ಅನಾರೋಗ್ಯ ಪೀಡಿತರಿಗೆ ಪ್ರತಿ ತಿಂಗಳ ಉಚಿತ ಮೆಡಿಸಿನ್ ಧನಸಹಾಯ, ಆರೋಗ್ಯ ಮಾಹಿತಿ ಕಾರ್ಯಕ್ರಮ, ಆರೋಗ್ಯ ಮಾಹಿತಿ ಪುಸ್ತಕ ಬಿಡುಗಡೆ, ಸಮಾಜ ಸೇವಕರಿಗೆ ಸನ್ಮಾನ, ಆರ್ಥಿಕ ಹಿಂದುಳಿದವರಿಗೆ ಉಚಿತ ಅಕ್ಕಿ ಮತ್ತು ಪಡಿತರ ಕಿಟ್ ವಿತರಣಾ ಕಾರ್ಯಕ್ರಮ ತಾ.17/01/2021 ರಂದು 3ಗಂಟೆಗೆ ಕಳತ್ತೂರು ಕುಶಲ ಶೇಖರ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿರುವುದು. ಉದ್ಘಾಟನೆಯನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿವರು. ಮುಖ್ಯ ಅತಿಥಿಯಾಗಿ ಸುರೇಶ್ ಶೆಟ್ಟಿ ಗುರ್ಮೆ, ಹಾಜಿ ಕೆ ಅಬುಬಕ್ಕರ್ ಪರ್ಕಳ, ಶೇಖರ ಬಿ ಶೆಟ್ಟಿ ಅಬುದಾಬಿ, ವಿಲ್ಸನ್ ಕುಂದರ್,ಜೆಸಿಂತ ಬರ್ಬೊಜ ಬೆಹರಿನ್, ಮಲಬಾರ್ ಗೋಲ್ಡ್ ಉಡುಪಿ ಶಾಖೆಯ ಮುಖ್ಯಸ್ಥರಾದ ಹಫೀಝ ರೆಹಮಾನ್, ವ್ಯವಸ್ಥಾಪಕರಾದ ರಾಘವೇಂದ್ರ ನಾಯಕ್ ಭಾಗವಹಿಸಲಿರುವವರು. ಎಂದು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ, ಗೌರವ ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು ತಿಳಿಸಿದ್ದಾರೆ.
