ಕಾಪು ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಗಂಭೀರ ಗಾಯ.ಮತ್ತೆ ಮರುಕಳಿಸದ ಹಿಂದಿನ ಘಟನೆ,ಗುತ್ತಿಗೆದಾರನ ಬೇಜವಬ್ದಾರಿಯೇ ಮೂಲ ಕಾರಣವೆಂದು ಆರೋಪಿಸಿದ ಸಾರ್ವಜನಿಕರು.
ಕಾಪು ; ಕಳೆದೊಂದು ತಿಂಗಳ ಹಿಂದೆಯಷ್ಟೆ ಕಾಪುವಿನಲ್ಲಿ ಒಳಚರಂಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣು ಹುಸಿದು ಕಾರ್ಮಿರಿಬ್ಬರು ಮೃತ ಪಟ್ಟಿದ್ದರು .ಆದರೇ ಇಂದು ಮತ್ತೆ ಅದೇ ರೀತಿಯ ಘಟನೆ ಕಾಪುವಿನ ಆಂಜನೇಯ ಕಾಂಪ್ಲೆಕ್ಸ್ ನ ಎದುರಿನಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣು ಕುಸಿದ ಕಾರಣ ಒರ್ವ ಕಾರ್ಮಿಕನಿಗೆ ಗಂಭೀರ ಗಾಯವಾಗಿದ್ದು ಖಾಸಾಗಿ ಆಸ್ಪತ್ರೆಗೆ ದಾಖಲಾಗಿದೆ.ಕಾಪು ತಾಲೂಕಿನ ನಗರದೊಳಗೆ ಪುರಸಭೆಗೆ ಒಳಪಟ್ಟ ಒಳ ಚರಂಡಿ ಕಾಮಗಾರಿ ಸಂಧರ್ಭದಲ್ಲಿಸುಮಾರು ೯ ಅಡಿ ಮಣ್ಣು ಅಗಿದು ಪೈಪ್ ಅಳವಡಿಸುತ್ತಿರುವ ಸಂಧರ್ಬದಲ್ಲಿಈ ದುರ್ಘಟನೆ ನಡೆದಿದೆ.
ಮತ್ತೆ ಬೇಜವಾಬ್ದಾರಿ ಪ್ರದರ್ಶಿಸಿದ ಗುತ್ತಿಗೆದಾರ
ಕಳೆದ ಸಲ ಇದೇ ರೀತಿಯ ಅವಘಡ ಸಂಭವಿಸಿದ್ದರೂ ಕೂಡ ಮತ್ತೆ ಈ ಸಲ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಕಾಮಗಾರಿ ನಡೆಸುತ್ತಿರುವುದು ವಿಪರ್ಯಾಸವೇ ಸರಿ.ಸರಿಯಾದ ಸೂಚನ ಫಲಕವಿಲ್ಲದೇ ಒಟ್ಟಾರೆಯಾಗಿ ಕಾಮಗಾರಿ ನಡೆಸುವುದರಿಂದ ಸಾರ್ವಜನಿಕರಿಗೆ ಕೂಡ ಸಮಸ್ಯೆ ಉಂಟಾಗಿದೆ.
ಸಹಕರಿಸಿದ ಸಾರ್ವಜನಿಕರು.
ಮಣ್ಣು ಕುಸಿದು ಬೀಳುತ್ತಿದ್ದಂತೆ ನೋಡಿದ ಮತ್ತೋರ್ವ ಕಾರ್ಮಿಕ ಬೊಬ್ಬೆ ಹಾಕಲು ಶುರುಮಾಡಿದಾಗ ಅಲ್ಲಿದ್ದ ಸಾರ್ವಜನಿಕರು ಕೂಡಲೇ ಕಾರ್ಮಿಕನನ್ನು ಮೇಲೆತ್ತುವಲ್ಲಿ ಸಹಕರಿಸಿ ಯಶಸ್ವಿಯಾದರು.







