ಕಾಪು ಕಾಂಗ್ರೇಸ್ ಮುಖಂಡರ ಅಂಗಡಿ ಬಂದ್ ಮಾಡಿಸಲು ಸೊರಕೆ ಫೀಲ್ಡ್ ಗೆ ಇಳಿದ್ರು
ಕಾಪು ಕಾಂಗ್ರೇಸ್ ಮುಖಂಡರ ಅಂಗಡಿ ಬಂದ್ ಮಾಡಿಸಲು ಸೊರಕೆ ಫೀಲ್ಡ್ ಗೆ ಇಳಿದ್ರು.
ಕಾಪು: ಪೆಟ್ರೋಲ್ ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೇಸ್ ಕರೆ ನೀಡಿರುವ ಭಾರತ್ ಬಂದ್ ಗ್ ಕಾಪುವಿನಲ್ಲಿ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾಗಿದೆ.
ಬೆಳಗ್ಗಿನ ಜಾವ ಎಲ್ಲಾ ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದು ಅದರಲ್ಲೂ ವಿಶೇಷವಾಗಿ ಬಂದ್ ಗೆ ಕರೆ ನೀಡಿದ್ದ ಕಾಂಗ್ರೇಸ್ ಮುಖಂಡರ ಅಂಗಡಿ, ರೆಸ್ಟೋರೆಂಟ್ ಬಾಗಿಲೂ ಕೂಡ ತೆರೆದಿದ್ದು ಅದನ್ನ ಮುಚ್ಚಿಸಲು ಸ್ವತಹ ಕಾಪುವಿನ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ರಸ್ತೆಗಿಳಿದು ವಿನಂತಿಸಬೇಕಾಯಿತು.ಆದರೆ ಅವರ ಎದುರು ಶಟರ್ ಎಳೆದು ನಾಟಕೀಯ ವರ್ತನೆ ನಡೆಸಿದ ನಾಯಕರು ಸೊರಕೆ ಹಾಗೂ ಕಾರ್ಯಕರ್ತರು ರಾಜೀವ್ ಭವನ ಮುಟ್ಟುವುದರೊಳಗೆ ಮತ್ತೆ ಎಂದಿನಂತೆ ಕಾರ್ಯ ನಿರ್ವಹಿಸಿದರು.

