ಕಾಪು: ಗಾಂಜಾ ಸೇವನೆ – ಯುವಕನ ವಿರುದ್ಧ ಪ್ರಕರಣ ದಾಖಲು – Vishwanews24
ಕಾಪು: ಗಾಂಜಾ ಸೇವನೆ-ಯುವಕನ ವಿರುದ್ಧ ಪ್ರಕರಣ ದಾಖಲು
ಕಾಪು : ಉದ್ಯಾವರ ಗ್ರಾಮದ ಬೋಳಾರ್ ಗುಡ್ಡೆ ಸಿದ್ಧಿವಿನಾಯಕ ಗ್ರೌಂಡ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನ ವಿರುದ್ಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು ಠಾಣಾ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿ ಇದ್ದ ವೇಳೆ ಉದ್ಯಾವರ ಗ್ರಾಮದ ಬೋಳಾರ್ ಗುಡ್ಡೆ ಸಿದ್ಧಿವಿನಾಯಕ ಗ್ರೌಂಡ್ ಬಳಿ ಉಡುಪಿಯ ಬಯಲೈಪಾದೆ ನಿವಾಸಿ ಶ್ರೀಶ ವಿ (20) ಎಂಬಾತನನ್ನು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದ್ದು, ಈತನ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟ ಕಾರಣ ಈತನ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
