ಕಾಪು : ಚಂದ್ರನಗರದಲ್ಲಿ ನಾಲ್ಕು ರಸ್ತೆ ಗುರುತಿಸುವ ನಾಮ ಫಲಕ ಉದ್ಘಾಟನೆ -Vishwanews24

Featured, ಉಡುಪಿ

ಚಂದ್ರನಗರದಲ್ಲಿ ನಾಲ್ಕು ರಸ್ತೆ ಗುರುತಿಸುವ ನಾಮ ಫಲಕ ಉದ್ಘಾಟನೆ -Vishwanews24

ಕಾಪು : ಸಮಾಜ ಸೇವಾ ವೇದಿಕೆ ಕಳತ್ತೂರು ಕಾಪು ಇದರ ಆಶ್ರಯದಲ್ಲಿ ಸಫಿಯಾ ಉಮರಬ್ಬ ಫ್ಯಾಮಿಲಿ ಟ್ರಸ್ಟ್ ಚಂದ್ರನಗರ ಇದರ ವತಿಯಿಂದ  ಚಂದ್ರನಗರದಲ್ಲಿ ನಾಲ್ಕು ರಸ್ತೆ ಗುರುತಿಸುವ ನಾಮಫಲಕವನ್ನು ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್ ಇವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಿಗೆ ಸಮಾಜ ಸೇವಾ ವೇದಿಕೆ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ತದನಂತರ ಮಾತನಾಡಿದ ಅವರು ಸಮಾಜ ಸೇವಾ ವೇದಿಕೆಯವರ ಹಲವಾರು ಸಮಾಜ ಮುಖಿ ಕರ‍್ಯಕ್ರಮ ಮುಂಚೂಣಿಯಲ್ಲಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ನಾಮ ಫಲಕವು ಉದ್ಘಾಟನೆ ಮಾಡಲು ನನಗೆ ಸಂತೋಷವಾಗುತ್ತದೆ ಎಂದರು.

ಉಳ್ಳಾಲದ ಜನರಿಗೆ ತಾಕತ್ತು ಎನ್ನುವುದು ಇದ್ದರೆ ಮುಸ್ಲಿಮೇತರರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ : ಕಲ್ಲಡ್ಕ ಪ್ರಭಾಕರ್ ಭಟ್ -Vishwanews24

ಕಾರ‍್ಯಕ್ರಮದಲ್ಲಿ ಸಮಾಜಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ, ಗೌರವ ಅಧ್ಯಕ್ಷರಾದ ದಿವಾಕರ ಬಿಶೆಟ್ಟಿ ಕಳತ್ತೂರು, ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು, ಉಪಾಧ್ಯಕ್ಷರಾದ ರಾಜೇಶ್ ಕುಲಾಲ್ ಕುತ್ಯಾರು, ಸಫಿಯಾ ಉಮರಬ್ಬ ಫ್ಯಾಮಿಲಿ ಟ್ರಸ್ಟ್ ಚಂದ್ರನಗರ ಇದರ ಸ್ಥಾಪಕ ಅಧ್ಯಕ್ಷರಾದ ಕೆ ಉಮರಬ್ಬ ಚಂದ್ರನಗರ, ಗ್ಲಾಡಿಸ್ ಅಲ್ಮೆಡಾ ಕಳತ್ತೂರು, ಸುಧಾವತಿ ಶೆಟ್ಟಿಗಾರ, ಲಿಯೋ ಮೆಂಡೋನ್ಸಾ, ವಿಲ್ಸನ್ ಕುಂದರ್ ಕಳತ್ತೂರು, ದಿನೇಶ್ ಆಚಾರ್ಯ ಐಶ್ವರ್ಯ ಶಿರ್ವ, ರಜಾಕ್ ಕೊಪ್ಪಲತೋಟ, ದಯಾನಂದ ಕೆ. ಶೆಟ್ಟಿ ದೆಂದೂರು, ಗಣೇಶ್ ಶೆಟ್ಟಿ ಪೈಯ್ಯಾರು, ನವೀನ್
ಹೆಜಮಾಡಿ, ಶ್ರೀಧರ್ ಭಟ್ ಚಂದ್ರನಗರ, ಇಸ್ಮಾಯಿಲ್ ಪಾದೂರು ಹಾಜಿ ಬಾವು ಚಂದ್ರನಗರ, ರಾಜೇಶ್ ಪಾದೂರು, ಉಮೇಶ್ ರಾವ್ ಚಂದ್ರನಗರ, ಪ್ರವೀಣ್ ಕೋಡ್ದ, ಕಾಪು ಪೊಲೀಸ್ ಇಲಾಖೆಯ ಪ್ರವೀಣ್, ರಾಘವೇಂದ್ರ, ಸುಧಾಕರ ಬಿಜೂರು, ಶಿರ್ವ ಎ.ಎಸ್.ಐ ಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಜೂ.14ರಿಂದ 25ರವರೆಗೆ SSLC ಪರೀಕ್ಷೆ ; ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ -Vishwanews24