ಕಾಪು : ತರಕಾರಿ ತುಂಬಿದ ಲಾರಿ ಪಲ್ಟಿ,ಪವಾಡಸದೃಶ ಪಾರಾದ ಚಾಲಕ ಮತ್ತು ಕ್ಲೀನರ್
ಕಾಪು : ತರಕಾರಿ ಲಾರಿ ಪಲ್ಟಿ,ಪವಾಡಸದೃಶ ಪಾರಾದ ಚಾಲಕ ಮತ್ತು ಕ್ಲೀನರ್
ಕಾಪು: ಶಿವಮೊಗ್ಗದಿಂದ ತರಕಾರಿ ತುಂಬಿಸಿಕೊಂಡು ಮಂಗಳೂರು ಕಡೆ ಹೋಗುತ್ತಿದ್ದ ಲಾರಿಯೊಂದು ಕಾರು ಗೆ ಸೈಡ್ ನೀಡುವ ಭರದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆಯ ಇಕ್ಕೆಲ್ಲಕ್ಕೆ ಬಿದ್ದ ಘಟನೆ ಶುಕ್ರವಾರ ತಡರಾತ್ರಿ ಸುಮಾರು ೨ ಗಂಟೆಯ ಸಮಯದಲ್ಲಿ ಕಾಪು ಸಮೀಪದ ದಂಡತೀರ್ಥ ಶಾಲೆಯ ಮುಂಭಾಗ ನಡೆದಿದೆ.
ಪಲ್ಟಿಯಾದ ರಭಸಕ್ಕೆ ಲಾರಿ ವಿದ್ಯುತ್ಕಂಬಗಳಿಗೆ ಗುದ್ದಿ ಒಂದು ಕಂಬ ತುಂಡಾಗಿದ್ದು,ಲಾರಿ ಚಾಲಕ ಸದ್ದಾಂ,ಮತ್ತು ಕ್ಲೀನರ್ ಮಧು ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಕಾಪು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


