ಕಾಪು  : ನಿಲ್ಲಿಸಿದ್ದ ದ್ವಿಚಕ್ರ ವಾಹನದ ಸೀಟಿನ ಕೆಳಗೆ ಇಟ್ಟಿದ್ದ ಚಿನ್ನದ ಸರ ಕಳವು – Vishwanews24

Featured, ಉಡುಪಿ

ಕಾಪು  : ನಿಲ್ಲಿಸಿದ್ದ ದ್ವಿಚಕ್ರ ವಾಹನದ ಸೀಟಿನ ಕೆಳಗೆ ಇಟ್ಟಿದ್ದ ಚಿನ್ನದ ಸರ ಕಳವು

ಕಾಪು  : ತಾಲೂಕಿನ ಮಲ್ಲಾರು ಗ್ರಾಮದ ಕೊಪ್ಪಲಂಗಡಿಯಲ್ಲಿ ಅಂಗಡಿಯೊಂದರ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಸೀಟಿನ ಕೆಳಗೆ ಇಟ್ಟಿದ್ದ ಚಿನ್ನದ ಸರವನ್ನು ಕಳ್ಳರು ಕಳವು ಮಾಡಿರುವ ಘಟನೆ ನಡೆದಿದೆ.

ಶಿವಳ್ಳಿ ಗ್ರಾಮದ ಸಗ್ರಿ ನಿವಾಸಿ ಪೂಜಾ ಅವರು, ಫೆ.17 ರಂದು ತಮ್ಮ ದೊಡ್ಡಮ್ಮನ ಮಗಳಾದ ಉಷಾರೊಂದಿಗೆ ಕಾಪುವಿನ ಮಲ್ಲಾರು ಗ್ರಾಮದ ಕೊಪ್ಪಲಂಗಡಿಗೆ ತಮ್ಮ ದ್ವಿಚಕ್ರ ವಾಃನದಲ್ಲಿ ಬಂದಿದ್ದರು. ಇಲ್ಲಿನ ಅಂಗಡಿಯೊಂದರ ಮುಂದೆ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ಮಗುವಿಗೆ ಪೆನ್ಸಿಲ್ ಸೆಟ್ ನ್ನು ತೆಗೆದುಕೊಳ್ಳುವ ಸಲುವಾಗಿ ಸ್ಟೇಷನರಿ ಅಂಗಡಿಗೆ ಹೋಗಿ ಮರಳಿ ಸ್ಕೂಟರ್ ಇಟ್ಟಲ್ಲಿಗೆ ಬಂದಿದ್ದರು.

ಈ ವೇಳೆ ದ್ವಿಚಕ್ರ ವಾಹನದ ಸೀಟಿನ ಲಾಕ್ ತೆರೆದು ಮೊಬೈಲನ್ನು ಒಳಗೆ ಇಡುವಾಗ ಅಲ್ಲಿ ಇಟ್ಟಿದ್ದ ಬೆಸುಗೆ ಹಾಕಿಸುವುದಕ್ಕಾಗಿ ತಂದಿದ್ದ ಚಿನ್ನದ ಸರ ಹಾಗೂ ಪೆಂಡೆಂಟ್ ಇದ್ದ ಸಣ್ಣ ಪರ್ಸ್ ಕಂಡು ಬಂದಿರುವುದಿಲ್ಲ. ಈ ಬಗ್ಗೆ ಅಕ್ಕ ಪಕ್ಕದವರಲ್ಲಿ ಹಾಗೂ ಹತ್ತಿರದ ಅಂಗಡಿಯಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅದರಂತೆ ಕಳ್ಳರು ಪೂಜಾ ಅವರ ದ್ವಿಚಕ್ರ ವಾಹನದ ಸೀಟಿನ ಲಾಕ್ ಓಪನ್ ಮಾಡಿ ಒಳಗೆ ಇಟ್ಟಿದ್ದ 48,000 ರೂ. ಮೌಲ್ಯದ 16 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗೆ ಎಸ್ ಡಿಪಿಐ ಟಿಕೆಟ್ : ಕ್ರಿಮಿನಲ್ ಹಿನ್ನೆಲೆ ವ್ಯಕ್ತಿಯನ್ನು ಅಭ್ಯರ್ಥಿ ಮಾಡಿರುವುದು ಸರಿಯಲ್ಲ : ಸಂಸದ ನಳಿನ್ – Vishwanews24

Leave a Reply