ಕಾಪು- ಮಹರಾಷ್ಟ್ರದಿಂದ ಬಂದ ವ್ಯಕ್ತಿಯಿಂದ ಹೋಮ್ ಕ್ವಾರಂಟೈನ್ ಆದೇಶ ಉಲ್ಲಂಘನೆ ಪ್ರಕರಣ ದಾಖಲು.vishwanews24

Featured, ಉಡುಪಿ

ಕಾಪು- ಮಹರಾಷ್ಟ್ರದಿಂದ ಬಂದ ವ್ಯಕ್ತಿಯಿಂದ ಹೋಮ್ ಕ್ವಾರಂಟೈನ್ ಆದೇಶ ಉಲ್ಲಂಘನೆ

ಪ್ರಕರಣ ದಾಖಲು.

 

ಕಾಪು: ಕೊರೋನಾ ವೈರಸ್ ಸೊಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತರ ರಾಜ್ಯಗಳಿಂದ ಬರುವ ವ್ಯಕ್ತಿಗಳನ್ನು 14 ದಿನಗಳ ಹೋಮ್ ಕ್ವಾರಂಟೈನ್ ಇಡುವಂತೆ ಮಾನ್ಯ ಜಿಲ್ಲಾಧಿಕಾರಿಯವರ ಆದೇಶವಿದ್ದು, ದಿನಾಂಕ: 15-06-2020 ರಂದು ಮಹಾರಾಷ್ಟ್ರ ರಾಜ್ಯದಿಂದ ಬಂದಿದ್ದ ಆರೋಪಿ ಮೋಹನ್ ಎಸ್ ಸಾಲಿಯಾನ್ ಎಂಬವರನ್ನುಹೋಮ್ ಕ್ವಾರಂಟೈನ್ ನಲ್ಲಿರಿಸಿ ಅವರ ಮನೆಯನ್ನು ಸೀಲ್ ಡೌನ್ ಮಾಡಿದ್ದರು ಆರೋಪಿ ತಾನು ಮಹಾರಾಷ್ಟ್ರದಿಂದ ಬಂದ ದಿನದಿಂದ ಹೋಮ್ ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿ ಹೊರಗೆ ಓಡಾಡುತ್ತಿರುವುದಾಗಿ ದೂರುಗಳು ಬಂದಿದ್ದು, ಈ ಬಗ್ಗೆ ಆರೋಪಿಗೆ ಹೋಮ್ ಕ್ವಾರಂಟೈನ್ ನಿಂದ ಹೊರಗೆ ಬಾರದಂತೆ ದಿನಾಂಕ: 16-06-2020 ರಂದು ಪುರಸಭೆ ಮುಖ್ಯಾಧಿಕಾರಿ ಆತನ ಮನೆಗೆ ಹೋಗಿ ತಿಳಿಸಿದ್ದರು ಆರೋಪಿ ಮೋಹನ್ ಎಸ್ ಸಾಲಿಯಾನ್ ರವರು ಹೋಮ್ ಕ್ವಾರಂಟೈನ್ ಆದೇಶವನ್ನುಉಲ್ಲಂಘಿಸಿ ಹೊರಗೆ ಓಡಾಡುತ್ತಿರುವುದಾಗಿ ತಿಳಿದು ಬಂದಿರುವುದರಿಂದ ಸದ್ರಿ ಆರೋಪಿ ಮೋಹನ ಎಸ್ ಸಾಲಿಯಾನ್ ರವರನ್ನು ದಿನಾಂಕ: 18-06-2020 ರಂದು ಹೋಮ್ ಕ್ವಾರಂಟೈನ್ ನಿಂದ ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿರುವ ಸಾಂಸ್ಥಿಕ ಕ್ವಾರಂಟೈನ್ ಗೆ ವರ್ಗಾಯಿಸಿದ್ದು, ಆರೋಪಿ ಹೋಮ್ ಕ್ವಾರಂಟೈನ್ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದರಿಂದ ಕಾಪು ಪುರಸಭಾ ಮುಖ್ಯಧಿಕಾರಿ ನೀಡಿದ ದೂರಿನ ಅನ್ವಯ ಕಾಪು ಠಾಣೆಯಲ್ಲಿ ಅಪರಾಧ ಸಂಖ್ಯೆ 71/2020 ಕಲಂ 269,271 ಐ ಪಿ ಸಿ ಹಾಗೂ ಕಲಂ .51 (B) DM Act ಅನ್ವಯ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.ಎಂದು ಮಾಧ್ಯಮಕ್ಕೆ ಪೋಲಿಸ್ ಪ್ರಕಟನೆ ತಿಳಿಸಿದೆ.