ಕಾಪು: ರೈಲಿನಿಂದ ಇಳಿಯುವಾಗ ಹೃದಯಾಘಾತ ; ವ್ಯಕ್ತಿ ಸಾವು – Vishwanews24

Featured, ಉಡುಪಿ

ರೈಲಿನಿಂದ ಇಳಿಯುವಾಗ ಥಾಣೆ ರೈಲು ನಿಲ್ದಾಣದಲ್ಲಿ ಹೃದಯಾಘಾತ ..

ಮುಂಬೈ ಬಿಲ್ಲವ ಸಂಘದ ಸದಸ್ಯ ಮತ್ತು ಭಾರತ್ ಬ್ಯಾಂಕ್ ವೈಲ್ ಪಾರ್ಲೆ (ಇ) ಮುಂಬೈನ ಸಹಾಯಕ ವ್ಯವಸ್ಥಾಪಕ ಕಟಪಾಡಿ ಸುಧಾಕರ್ ಟಿ ಅಂಚನ್ ನಿಧನ

ಕಾಪು: ಮುಂಬೈ ಬಿಲ್ಲವ ಸಂಘದ ಸದಸ್ಯ ಮತ್ತು ಭಾರತ್ ಬ್ಯಾಂಕ್ ವೈಲ್ ಪಾರ್ಲೆ (ಇ) ಮುಂಬೈನ ಸಹಾಯಕ ವ್ಯವಸ್ಥಾಪಕ ಸುಧಾಕರ್ ಟಿ ಅಂಚನ್ (52) ಅವರು ಬುಧವಾರ ಬೆಳಿಗ್ಗೆ ಮುಂಬೈ ಎಕ್ಸ್‌ಪ್ರೆಸ್ ರೈಲಿನಿಂದ ಇಳಿಯುವಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸುಧಾಕರ್ ತಮ್ಮ ಹತ್ತಿರದ ಸಂಬಂಧಿಯ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾಪುಗೆ ಬಂದಿದ್ದರು. ಅಲ್ಲಿಂದ ಮುಂಬೈ ಎಕ್ಸ್‌ಪ್ರೆಸ್ ರೈಲಿನಲ್ಲಿ ಹಿಂತಿರುಗಿ ರೈಲಿನಿಂದ ಇಳಿಯುತ್ತಿದ್ದಂತೆ ಥಾಣೆ ರೈಲು ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಮೃತರು ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಮೂಲತಃ ಕಟಪಾಡಿಯವರಾಗಿರುವ ಅವರು ಬಿಲ್ಲವ ಸಂಘಟನೆಯಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದರು.

ಮುಂಬೈ: ದಡಾರದಿಂದ 8 ತಿಂಗಳ ಮಗು ಸಾವು.. 12ಕ್ಕೇರಿದ ಸಾವಿನ ಸಂಖ್ಯೆ – ಕರ್ನಾಟಕದಲ್ಲಿ ಆತಂಕ

Leave a Reply