ಕಾಪುವಿನಲ್ಲಿ ಗಾಳಿಮಳೆಯ ರೌದ್ರ ನರ್ತನ ಮರ ಬಿದ್ದು ಮನೆ ಭಾಗಶಃ ನಾಶ
ಕಾಪುವಿನಲ್ಲಿ ಗಾಳಿಮಳೆಯ ರೌದ್ರ ನರ್ತನ ಮರ ಬಿದ್ದು ಮನೆ ಭಾಗಶಃ ನಾಶ.
ಕಾಪು: ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಸುರಿಯುವ ಮಳೆ ಹಾಗೂ ರಭಸದಿಂದ ಬೀಸುತ್ತಿರುವ ಗಾಳಿಗೆ ಕರಾವಳಿ ಭಾಗ ತತ್ತರ ಗೊಂಡಿದೆ.
ಗುರುವಾರ ಮುಂಜಾನೆ ಸುಮಾರು ನಾಲ್ಕು ಗಂಟೆ ಸುಮಾರಿಗೆ ಬೀಸಿದ ಗಾಳಿಗೆ ಕಾಪು ಲಕ್ಷ್ಮೀ ಜನಾರ್ಧನ ದೇಗುಲದ ಬದಿಯಲ್ಲಿರುವ ಗಣೇಶ್ ಎಂಬವರ ಮನೆಗೆ ಭಾರಿ ಗಾತ್ರದ ತೆಂಗಿನಮರ ಬಿದ್ದು ಮನೆ ಭಾಗಶಃ ನಾಶವಾಗಿದೆ.
ಮನೆಯೊಳಗೆ ಮಲಗಿದ್ದ ಜನರಿಗೆ ಅಲ್ಪಸ್ವಲ್ಪ ಗಾಯವಾಗಿದ್ದು ಪ್ರಥಮ ಚಿಕಿತ್ಸೆ ಆರೈಕೆ ನಡೆಯುತ್ತಿದೆ.
ಸ್ಥಳಕ್ಕೆ ಕಾಪು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯ ಯುವಕರಾದ ಪ್ರಶಾಂತ್ ಪೂಜಾರಿ ಮತ್ತು ತಂಡದವರಿಂದ ಮರಗಳ ತೆರವು ಕಾರ್ಯ ಮುಂದುವರಿದಿದೆ.
ಕಾಪು ಪಡು ಗ್ರಾಮದ ಹೊಸ ಮಾರಿಗುಡಿ ದೇವಸ್ತಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಸುರೇಶ್ ಪ್ರಭು ರವರ ಮನೆಯ ದಾಸ್ತಾನು ಕೋಣೆ
ಗುರುವಾರ ಬೆಳಿಗ್ಗೆ ಸುರಿದ ಮಳೆ ಗಾಳಿಗೆ ತೆ0ಗಿನ ಮರ ಬಿದ್ದು ಸಂಪೂರ್ಣ ನೆಲ ಸಮ ಗೊಂಡಿದೆ.
