ಕಾರಣಿಕ ಇತಿಹಾಸ ಪ್ರಸಿದ್ಧ ಮೂಳೂರು ಶ್ರೀ ಸರ್ವೇಶ್ವರ ಬಬ್ಬರ್ಯ ಕೊಡಮನಿತ್ತಾಯ ದೈವಸ್ಥಾನದಲ್ಲಿ ಹರಕೆಯ ತುಡರ ಬಲಿ

Featured, ಉಡುಪಿ

ಕಾರಣಿಕ ಇತಿಹಾಸ ಪ್ರಸಿದ್ಧ ಮೂಳೂರು ಶ್ರೀ ಸರ್ವೇಶ್ವರ ಬಬ್ಬರ್ಯ ಕೊಡಮನಿತ್ತಾಯ ದೈವಸ್ಥಾನದಲ್ಲಿ ಸರ್ವೇಶ್ವರ ಫ್ರೆಂಡ್ಸ್ ಮೂಳೂರು ಇವರ ವತಿಯಿಂದ ಹರಕೆಯ ತುಡರ ಬಲಿ ಸೇವೆಯು ವಿಜೃಂಭನೆಯಿಂದ ನಡೆಯಿತು. ಪೂರ್ವಹ್ನ ಐಯಂಗಳ ಕಟ್ಟೆಯಲ್ಲಿ ವನದುರ್ಗಾ ಪೂಜೆ ಹಾಗೂ ನಾಗದೇವರಿಗೆ ತನುತಂಬಿಲ ಸೇವೆಯೊಂದಿಗೆ ಮೊದಲ್ಗೊಂಡ ಪೂಜಾ ಕಾರ್ಯಕ್ರಮ ಮಧ್ಯಾಹ್ನ ಅನ್ನಸಂತರ್ಪಣೆ ನಡೆದು . ತದನಂತರ ಮೂಳೂರು ಬಿಲ್ಲವ ಸಂಘದಿಂದ ಆಕರ್ಷಕ ಹೂಹಿಂಗಾರದ ಮೆರವಣಿಗೆ ನಡೆಯಿತು. ರಾತ್ರಿ ಕೊಡಮಣಿತ್ತಾಯನ ತುಡರ ಬಲಿ ಸೇವೆ ಮತ್ತು ದರ್ಶನ ಸೇವೆಯೊಂದಿಗೆ ಸಮಾಪನೆಗೊಂಡಿತು. ಕಾರ್ಯಕ್ರಮದಲ್ಲಿ ಊರು ಪರ ಊರಿನ ಭಕ್ತರು ಭಾಗವಹಿಸಿದ್ದರು.