ಕಾರ್ಕಳ : ಪರೀಕ್ಷಾ ಹಾಲ್ ಟಿಕೆಟ್ ತರಲು ಹೋದ ವಿದ್ಯಾರ್ಥಿನಿ ವಿವಾಹಿತನೊಂದಿಗೆ ಪರಾರಿ -Vishwanews24

Featured, ದಕ್ಷಿಣ ಕನ್ನಡ

ಕಾರ್ಕಳ: ಕಾಲೇಜ್‌ಗೆ ಹೋಗಿ ಪರೀಕ್ಷಾ ಹಾಲ್  ಟಿಕೆಟ್ ತರಲು ಹೋದ ವಿದ್ಯಾರ್ಥಿನಿ ವಿವಾಹಿತನೊಂದಿಗೆ ಪರಾರಿ. ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿನಿ ಸುಧಾ ವಿ. ಭಟ್ (18) ಕಾರ್ಕಳ ಪೇಟೆಯ ಬಸ್ ನಿಲ್ದಾಣದಲ್ಲಿ ಮೊಬೈಲ್ ಅಂಗಡಿಯ ರೋಷನ್ ಪೂಜಾರಿ ಎಂಬಾತನೊಂದಿಗೆ ಪರಾರಿಯಾಗಿದ್ದಾಳೆ.

ಸುಧಾ ಕಾಲೇಜ್‌ಗೆ ಹೋಗುವಾಗ ರೋಷನ್ ಮೊಬೈಲ್ ಅಂಗಡಿಯಲ್ಲಿ ರಿಚಾರ್ಜ್ ಮಾಡಲು ಹೋಗಿ ಪರಿಚಯವಾಗಿ ನಂತರ ಅವರಿಬ್ಬರ ನಡುವೆ ಗಾಢ ಪ್ರೇಮಾಂಕುರವಾಗಿ ಕಳೆದ 7 ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರೆಂದು ತಿಳಿದು ಬಂದಿದೆ.

ಆದರೆ ಇವರ ಪ್ರೇಮಕ್ಕೆ ಸುಧಾಳ ವಯಸ್ಸು ಅಡ್ಡಿಯಾಗಿತ್ತು. ಕಾರಣ ಯುವತಿಗೆ ಅಪ್ರಾಪ್ತೆಯಾಗಿದ್ದಳು. ಅದಕ್ಕಾಗಿ ಯುವತಿಗೆ 18 ವರ್ಷ ತುಂಬುತ್ತಿದ್ದಂತೆ ಅ.21 ರಂದು ಈಗಾಗಲೇ ಯುವತಿಯೊರ್ವಳನನ್ನು ಪ್ರೀತಿಸಿ ಮದುವೆಯಾಗಿದ್ದ ರೋಷನ್ ಜೊತೆ ಪರಾರಿಯಾಗಿದ್ದಾಳೆ.

ಮೊಬೈಲ್ ರೀಚಾಜ್‌ಗೆಂದು ರೋಶನ್ ಪೂಜಾರಿ ಅಂಗಡಿ ಬರುತ್ತಿದ್ದ ಸುಧಾಳನ್ನು ಪ್ರೀತಿಸುವ ನೆಪದಲ್ಲಿ ಪುಸಲಾಯಿಸಿ ವಿವಾಹದ ನಾಟಕವಾಡಿ ಆಕೆಯೊಂದಿಗೆ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು ಸುಧಾ ಭಟ್ ಮರಳಿ ಬರಬಹುದೆನ್ನುವ ನಿರೀಕ್ಷೆಯಲ್ಲಿ ಆಕೆ ನಾಪತ್ತೆಯಾದ 15 ದಿನಗಳ ಬಳಿಕ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.