ಕಾರ್ಕಳದ ಬ್ರಾಂಡ್ – ಕಾರ್ಲ ಕಜೆ ಅಕ್ಕಿಯ ಬಿಡುಗಡೆ -Vishwanews24

Featured, ಉಡುಪಿ

ಕಾರ್ಕಳದ ಬ್ರಾಂಡ್ – ಕಾರ್ಲ ಕಜೆ ಅಕ್ಕಿಯ ಬಿಡುಗಡೆ -Vishwanews24

ಕಾರ್ಕಳದ ಬ್ರಾಂಡ್ – ಕಾರ್ಲ ಕಜೆ ಅಕ್ಕಿ ಮತ್ತು ಕಾರ್ಲ ಬಿಳಿ ಬೆಂಡೆ ಯನ್ನು ಶಾಸಕರಾದ ಸುನಿಲ್ ಕುಮಾರ್‌  ಮಾನ್ಯ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ರಿಂದ ಉದ್ಘಾಟನೆ

ಕಾರ್ಕಳ : ಸ್ಥಳೀಯ ಬೆಳೆಗಳಿಗೆ ಒತ್ತು, ಮಾರುಕಟ್ಟೆ, ಆರ್ಥಿಕತೆ, ಸ್ವಾವಲಂಬನೆ, ವಿಶ್ವಕ್ಕೆ ಪರಿಚಯ ಹಾಗೂ ಗ್ರಾಹಕರನ್ನು ಬೆಸೆಯುವ ಪ್ರಯತ್ನವಾಗಿ ಕರಾವಳಿಗರು ದೈನಂದಿನ ಆಹಾರದಲ್ಲಿ ಬಳಸುವ ಕಾರ್ಕಳದ ಕಜೆ ಅಕ್ಕಿಗೆ ವ್ಯವಸ್ಥಿತ ಮಾರುಕಟ್ಟೆ ಮತ್ತು ಗುಣಮಟ್ಟ ಖಾತ್ರಿಗಾಗಿ ಬ್ರ್ಯಾಂಡಿಂಗ್ ಮಾಡುವ ಹಾಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಆತ್ಮನಿರ್ಭರ್ ಭಾರತಕ್ಕೆ ಪೂರಕವಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ “ಕಾರ್ಲಕಜೆ” ಕುಚ್ಚಲಕ್ಕಿಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಲ ಕಜೆ ಕುಚ್ಚಲಕ್ಕಿ ಬ್ರಾಂಡ್ ಬಿಡುಗಡೆ ಹಾಗೂ ಬಿಳಿಬೆಂಡೆ ಬ್ರಾಂಡನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಶಾಸಕರಾದ ಸುನಿಲ್ ಕುಮಾರ್‌ ,ಜಿ.ಪಂ ಸಿಇಓ ಡಾ.ನವೀನ್ ಭಟ್, ಜಂಟೀ ಕೃಷಿ ನಿರ್ದೇಶಕರಾದ ಕೆಂಪೇ ಗೌಡ, ತಾ.ಪಂ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.