ಕಿಚ್ಚ ಸುದೀಪ್ ನಿರ್ಧಾರ ನನಗೆ ನೋವು ತಂದಿದೆ : ಪ್ರಕಾಶ್ ರಾಜ್ – Vishwanews24

Featured, ರಾಜ್ಯ ನ್ಯೂಸ್

ಕಿಚ್ಚ ಸುದೀಪ್ ನಿರ್ಧಾರ ನನಗೆ ನೋವು ತಂದಿದೆ : ಪ್ರಕಾಶ್ ರಾಜ್

ಕಿಚ್ಚಸುದೀಪ್ ಬಿಜೆಪಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಬಲಿಸಿದ್ದಕ್ಕೆ ನಟ ಪ್ರಕಾಶ್ ರಾಜ್ ಪ್ರತಿಕ್ರಿಸಿದ್ದಾರೆ. ಸುದೀಪ್ ತಮ್ಮನ್ನು ತಾವು ಮಾರಿಕೊಳ್ಳುವುದಿಲ್ಲವೆಂದು ಭಾವಿಸಿದ್ದೇನೆ ಎಂದು ನಿನ್ನೆಯಷ್ಟೇ ಟ್ವಿಟ್ ಮಾಡಿದ್ದ ಪ್ರಕಾಶ್ ರಾಜ್  ನಂತರದ ಬೆಳವಣಿಕೆ ಕಂಡು ಸುದೀಪ್ ನೆಡೆಯು ನನಗೆ ಕೇವಲ ಅಚ್ಚರಿ ತಂದಿಲ್ಲ, ಅಪಾರ ನೋವನ್ನುಂಟು ಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ಪ್ರಕಾಶ್ ಅವರ ಮಾತಿಗೆ ಸುದೀಪ್ ‘ಅವರೊಂದಿಗೆ ನಾನು ನಟಿಸಲು ಕಾಯುತ್ತಿದ್ದೇನೆ’ ಎಂದಷ್ಟೇ ಉತ್ತರ ನೀಡಿದ್ದಾರೆ.

ಸುದೀಪ್ ಬಿಜೆಪಿಗೆ ನೇರವಾಗಿ ಬೆಂಬಲಿಸುತ್ತೇನೆ ಎಂದು ಹೇಳದೇ ಇದ್ದರೂ, ‘ನನಗೆ ಆತ್ಮೀಯರು, ಆಪ್ತರು ತುಂಬಾ ಜನ ರಾಜಕಾರಣದಲ್ಲಿ ಸಕ್ರೀಯರಾಗಿದ್ದಾರೆ. ಅಲ್ಲದೇ, ಅವರು ನನ್ನ ಕಷ್ಟದ ಕಾಲದಲ್ಲಿ ಕೈ ಹಿಡಿದಿದ್ದಾರೆ. ಅವರ ಪರವಾಗಿ ನಿಲ್ಲಬೇಕಾಗಿದ್ದು ನನ್ನ ಕರ್ತವ್ಯ ಈ ಕಾರಣದಿಂದಾಗಿ ನಾನು ಇಂಥದ್ದೊಂದು ನಿರ್ಧಾರವನ್ನು ತಗೆದುಕೊಂಡಿದ್ದೇನೆ’ ಎಂದಿದ್ದಾರೆ.

5,8 ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ : ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ – Vishwanews24

Leave a Reply