ಕಿಡ್ನಿ ವೈಪಲ್ಯ ಸಮಸ್ಯೆಯಿಂದ ಬಳಲುತ್ತಿರುವ ಬಡ ಕುಟುಂಬಕ್ಕೆ ನೆರವಿನ ಸಹಾಯ ಹಸ್ತ ಚಾಚಿದ ಕಾಪು ಕುಲಾಲ ಯುವ ವೇದಿಕೆ
ಕಾಪು : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮೂಡಬಿದ್ರೆ ಪುತ್ತಿಗೆ ಪದವು ಸಂಪಿಗೆ ನಗರ ನಿವಾಸಿಯ ಬಗ್ಗೆ ಕುಲಾಲ್ ವಲ್ಡ್ ವೆಬ್ ಸೈಟಿನಲ್ಲಿ ವಿಸ್ಕೃತ ವರದಿ ಬಂದಿತ್ತು. ಈ ವರದಿಗೆ ತತಕ್ಷಣ ಸ್ಪಂದಿಸಿದ ಕಾಪು ಕುಲಾಲ ಯುವ ವೇದಿಕೆಯು ಬಡ ಕುಟುಂಬಕ್ಕೆಸಹಾಯಹಸ್ತ ಚಾಚುವ ಭರವಸೆಯನ್ನು ನೀಡಿತ್ತು. ಈ ನಿಮಿತ್ತ ಸಹೃದಯಿ ದಾನಿಗಳಾದ ತಮ್ಮೆಲ್ಲರ ಬೆಂಬಲದಿಂದ ಒಟ್ಟುಗೂಡಿದ ಸಹಾಯಧನವನ್ನು ಹನಿ ಹನಿ ಸೇರಿ ಹಳ್ಳ ಎನ್ನುವಂತೆ ದಿನಾಂಕ 28/10/2018ನೇ ಭಾನುವಾರ ತಮ್ಮೆಲ್ಲರ ಸಹಾಯಧನ ಒಟ್ಟುಗೂಡಿ ರೂ 24,100ನ್ನು ಅವರ ಮನೆಗೆ ತೆರಳಿ ನೀಡಲಾಯಿತು ..
ಹಣ ಹಸ್ತಾಂತರ ಸಂದರ್ಭ ನಾನಿಲ್ತಾರ್ ಮುಂಡ್ಕೂರು ಕುಲಾಲ ಯುವ ವೇದಿಕೆಯ ಅಧ್ಯಕ್ಷರು ದೀಪಕ್ ಕುಲಾಲ್ ಬೆಳ್ಮಣ್,ಕಾಪು ಕುಲಾಲ ಯುವ ವೇದಿಕೆಯ ಅಧ್ಯಕ್ಷರು ಉದಯ ಕುಲಾಲ್ ಕಳತ್ತೂರು,ನಾನಿಲ್ತಾರ್ ಮುಂಡ್ಕೂರು ಕುಲಾಲ ಸಂಘದ ಸದಸ್ಯರು ಸುರೇಶ್ ಡಿ ಕುಲಾಲ್ ಇನ್ನ,ಸಂತೋಷ್ ಕುಲಾಲ್ ಸಾಂತೂರುಕೊಪ್ಪಲ ಇನ್ನ,ಅಕಾಶ್ ಕುಲಾಲ್ ಕಡೆಗುಂಜ ಇನ್ನ ಉಪಸ್ಥಿತರಿದ್ದರು..
ಬಡವರ ಕಣ್ಣೀರು ಒರೆಸುವ ಕಾಪು ಕುಲಾಲಯುವ ವೇದಿಕೆಯ ಸೇವಾ ಕೈಕಾರ್ಯಗಳಿಗೆ ಹೆಗಲುಕೊಟ್ಟು ಸಕಾಲದಲ್ಲಿ ನೆರವು ನೀಡಿ ಸಹಕರಿಸಿದ ಎಲ್ಲಾ ಸಹೃದಯಿ ಬಾಂಧವರಿಗೆ ಕಾಪು ಕುಲಾಲ ಯುವ ವೇದಿಕೆಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು..
ನೆರವು ನೀಡುವವರಿಗೆ ರಕ್ಷಿತಾ ಕುಲಾಲ್ ಅವರ ಸಹೋದರ ಮೋಹಿತ್ ಅವರ ಬ್ಯಾಂಕ್ ಅಕೌಂಟ್ ಮಾಹಿತಿ ಹೀಗಿದೆ:
Mohith
S/O Sesappa Kulal
VIJAYA BANK , VIJAYARAJ COMPLEX,
MOODBIDRI, DAKSHINA KANNADA, KARNATAKA, India (IN), Pin Code:- 574227
A/c no- 114901011002504
IFSC Code: VIJB0001149
MICR code- 575029033
Mobile number – 8197066101 / 8746923604


