ಕುಂದಾಪುರ: ಕೈಕಾಲು ತೊಳೆಯಲು ಹೊಳೆಗೆ ಇಳಿದಿದ್ದ ಯುವಕ ಕಾಲು ಜಾರಿ ಬಿದ್ದು ಮೃತ್ಯು – Vishwanews24
ಕುಂದಾಪುರ: ಕೈಕಾಲು ತೊಳೆಯಲು ಹೊಳೆಗೆ ಇಳಿದಿದ್ದ ಯುವಕ ಕಾಲು ಜಾರಿ ಬಿದ್ದು ಮೃತ್ಯು
ಕುಂದಾಪುರ: ಕುಂದಾಪುರ ತಾಲೂಕು ಬೇಳೂರು ಗ್ರಾಮದಲ್ಲಿ ಕೃಷಿ ಕೆಲಸ ಮುಗಿಸಿ ಸಂಜೆಯ ವೇಳೆ ಕೈಕಾಲು ತೊಳೆಯಲು ಹೊಳೆಗೆ ಇಳಿದಿದ್ದ ಯುವಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ಪ್ರಶಾಂತ ಆಚಾರ್ಯ (22) ಮೃತಪಟ್ಟ ಯುವಕ.
ಇನ್ನು ಪ್ರಶಾಂತ ಆಚಾರ್ಯ ಅವರು ಸ್ನೇಹಿತರೊಂದಿಗೆ ತೋಟದ ಸಸಿ ಬುಡ ಮಾಡುವ ಕೆಲಸಕ್ಕಾಗಿ ತೆರಳಿದ್ದು, ಕೆಲಸ ಮುಗಿಸಿ ಸಂಜೆ 5:45ರ ಸುಮಾರಿಗೆ ಕೈಕಾಲು ತೊಳೆಯಲು ಕೊಮೆ ಹೊಳೆ ಆರ್ ಬೆಟ್ಟು ಗುಂಡಿ ಎಂಬಲ್ಲಿ ಇಳಿದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ವಂಚನೆ : ತನಿಖೆಗೆ ನ್ಯಾಯಾಲಯ ಆದೇಶ – Vishwanews24
