“ಕುಂದಾಪುರ ಕ್ಷೇತ್ರದಲ್ಲಿ ಬದಲಾವಣೆ‌ ಪರ್ವ ಆರಂಭ” ಇಂಟೆಕ್‌ ರಾಜ್ಯಾಧ್ಯಕ್ಷ ರಾಕೇಶ ಮಲ್ಲಿ ಹೇಳಿಕೆ.

ಉಡುಪಿ

ಕೋಟ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಬದಲಾವಣೆಯ ಪರ್ವ ಆರಂಭಗೊಂಡಿದೆ  ಎಂದು  ಇಂಟೆಕ್‌ ರಾಜ್ಯಾಧ್ಯಕ್ಷ ರಾಕೇಶ ಮಲ್ಲಿ ಹೇಳಿದರು.

ಅವರು  ಮಧುವನದಲ್ಲಿ ನಡೆದ ಸಾೖಬ್ರಕಟ್ಟೆ ತಾ.ಪಂ. ವ್ಯಾಪ್ತಿಯ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರ ಸಮಾವೇಶದಲ್ಲಿ ಮಾತನಾಡಿದರು.

ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಸಾವಿರಾರು ಅಭಿಮಾನಿಗಳು ಸಭೆಗಳಿಗೆ  ಬರುತ್ತಿದ್ದಾರೆ.  ಮಾಜಿ ಶಾಸಕ ಶ್ರೀನಿವಾಸ ಶೆಟ್ಟರ ವೈಫಲ್ಯದ ಕುರಿತು ಕ್ಷೇತ್ರದ ಜನ ಧ್ವನಿ ಎತ್ತುತ್ತಿದ್ದಾರೆ.  ಇದು ಮುಂದಿನ ಬಾರಿ ಕ್ಷೇತ್ರದ್ಲಲಿ ಕಾಂಗ್ರೆಸ್‌ ವಿಜಯದ ಮನ್ಸೂಚನೆ ಎಂದರು.

ಕೋಟ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ್‌ ಕುಂದರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವಡ್ಡರ್ಸೆ ಗ್ರಾ.ಪಂ. ಅಧ್ಯಕ್ಷೆ ಹೇಮಾ, ಕುಂದಾಪುರ ನಗರ ಯೋಜನ ಪ್ರಾಧಿ ಕಾರದ ಅಧ್ಯಕ್ಷ ವಿಕಾಸ್‌ ಹೆಗ್ಡೆ, ಮಾಜಿ  ಅಧ್ಯಕ್ಷ  ಮಾಣಿ ಗೋಪಾಲ್‌,  ಕೋಟ ಸಿ.ಎ.ಬ್ಯಾಂಕ್‌ ಅಧ್ಯಕ್ಷ  ತಿಮ್ಮ ಪೂಜಾರಿ, ಐ.ಟಿ.ಸೆಲ್‌ ರಾಜ್ಯ ಪ್ರಧಾನ ಕಾರ್ಯದರ್ಶಿ  ಚಂದ್ರಶೇಖರ್‌ ಶೆಟ್ಟಿ,   ಕೋಟ ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ  ಅಚ್ಯುತ ಪೂಜಾರಿ, ಉಪಾಧ್ಯಕ್ಷ  ಕಿಶೋರ್‌ ಶೆಟ್ಟಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ  ಮಮತಾ ಕಿಶೋರ್‌ ಶೆಟ್ಟಿ, ಹಿಂದುಳಿದ  ವರ್ಗದ ಅಧ್ಯಕ್ಷ  ದಿನೇಶ್‌ ಬಂಗೇರ,   ಬ್ಲಾಕ್‌ ಇಂಟೆಕ್‌ ಅಧ್ಯಕ್ಷ  ದೇವೇಂದ್ರ ಗಾಣಿಗ, ಸ್ಥಾನೀಯ ಸಮಿತಿ ಅಧ್ಯಕ್ಷ  ಶ್ರೀನಿವಾಸ ಅಮೀನ್‌, ಕಾರ್ಯದರ್ಶಿ ರವೀಂದ್ರ ಕಾಮತ್‌,  ವಡ್ಡರ್ಸೆ ಗ್ರಾ.ಪಂ. ಸದಸ್ಯ ದುಯಾಕರ ಪೂಜಾರಿ,    ಯುತ್‌ ಇಂಟೆಕ್‌ ಅಧ್ಯಕ್ಷ ಅಜಿತ್‌ ಶೆಟ್ಟಿ,  ಹಿರಿಯ ಕಾಂಗ್ರೆಸಿಗರಾದ  ಶೇಖರ ಶೆಟ್ಟಿ,  ಗಣೇಶ್‌ ಮುಂತಾದವರು ಉಪಸ್ಥಿತರಿದ್ದರು.ಉಪನ್ಯಾಸಕ ಅಕ್ಷಯ ಶೆಟ್ಟಿ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.