ಕುಂದಾಪುರ : ಪ್ರಮೋದ್ ಬೆನ್ನ ಹಿಂದೆ ನಿಂತ ಹಾಲಾಡಿ – ಶೋಭಕ್ಕನಿಗೆ ಕೈ ಕೊಡುವರೇ ಪಂಚಪಾಂಡವ ಶಾಸಕರು…?? Vishwanews24
ಕುಂದಾಪುರ : ಪ್ರಮೋದ್ ಬೆನ್ನ ಹಿಂದೆ ನಿಂತ ಹಾಲಾಡಿ – ಶೋಭಕ್ಕನಿಗೆ ಕೈ ಕೊಡುವರೇ ಪಂಚಪಾಂಡವ ಶಾಸಕರು…??
ಕುಂದಾಪುರ: ಸದ್ಯ ಲೋಕಸಭಾ ಚುನಾವಣೆಯ ಬಿಸಿ ಗರಿಗೆದರುತ್ತಿರುವಂತೆ ಬಿಜೆಪಿ ಆಕಾಂಕ್ಷಿಗಳ ಪಟ್ಟಿಯು ಬೆಳೆಯುತ್ತಿದೆ ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಆಕಾಂಕ್ಷಿಗಳಾಗಿ ಈಗಾಗಲೇ ಐದು ಮಂದಿಯ ಹೆಸರು ಮುಂಚೂಣಿಯಲ್ಲಿದ್ದು ಈ ಪೈಕಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿಯೊಂದಿಗೆ ಸ್ಪರ್ಧೆ ಮಾಡಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೂಡ ರೇಸ್ ನಲ್ಲಿ ಮುಂದೆ ಇದ್ದಾರೆ.

ಈಗಾಗಲೇ ತನ್ನ ಕಾರ್ಯಚಟುವಟಿಕೆಯನ್ನ ಬಿರುಸು ಮಾಡಿರುವ ಪ್ರಮೋದ್ ಮದ್ವರಾಜ್ ಮಾಜಿ ಹಾಲಿ ಶಾಸಕರನ್ನು ಸಂಪರ್ಕಿಸುವ ಕೆಲಸ ಮಾಡಿದ್ದಾರೆಂದು ತಿಳಿದು ಬಂದಿದೆ.
ಉಡುಪಿ : ನಾನು ಈ ಬಾರಿ ಪಾರ್ಲಿಮೆಂಟ್ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿ : ಕುಯಿಲಾಡಿ – vishwanews24
ಕಳೆದೆರಡು ದಿನಗಳ ಹಿಂದೆ ಹಾಲಾಡಿ ಶ್ರೀನಿವಾಸ್ ಶೆಟ್ಟಿಯನ್ನು ಭೇಟಿ ಮಾಡಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೇಳಿಕೊಂಡಿದ್ದು ಇದಕ್ಕೆ ಸಹಮತ ಸೂಚಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ನಡುವೆ ಉಡುಪಿ ಜಿಲ್ಲೆಯ ಪಂಚಪಾಂಡವರಂತಿರುವ ಶಾಸಕರುಗಳ ಪೈಕಿ ಕುಂದಾಪುರ ಹೊರತುಪಡಿಸಿ ಉಳಿದ ನಾಲ್ಕು ಶಾಸಕರ ನಿಲುವಿನ ಬಗ್ಗೆ ಕಾದು ನೋಡಬೇಕಾಗಿದೆ.

ಪ್ರಮೋದ್ ಮಧ್ವರಾಜ್ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಕಸರತ್ತು ನಡೆಸಿದ್ದರು.
ಉಡುಪಿ : ನಾನು ಈ ಬಾರಿ ಪಾರ್ಲಿಮೆಂಟ್ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿ : ಕುಯಿಲಾಡಿ – vishwanews24
