ಕುಂದಾಪುರ ವಿಧ್ಯಾರ್ಥಿಗೆ ಚೂರಿ ಇರಿತ ಪ್ರಕರಣ : ಪರಾರಿಯಾಗಿದ್ದ ಬಾಲಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ..
ಉಡುಪಿ : ಕುಂದಾಪುರ ಕಾಲೇಜು ವಿದ್ಯಾರ್ಥಿಯೋರ್ವನಿಗೆ ಚೂರಿ ಇರಿದು ಪರಾರಿಯಾಗಿದ್ದ ಬಾಲಕನನ್ನು ಬಂಧಿಸುವಲ್ಲಿ ಕುಂದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ತಿಂಗಳು ಕುಂದಾಪುರ ಜ್ಯೂನಿಯರ್ ಕಾಲೇಜು ವಿದ್ಯಾರ್ಥಿ ಅನುಪ್ ಎನ್ನುವ ಬಾಲಕನಿಗೆ ಪ್ರೇಯಸಿಯ ವಿಚಾರವಾಗಿ ಅದೆ ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ನಾಲ್ವರು ಸೇರಿ ಸ್ಕೇಚ್ ಹಾಕಿ ಕಾಲೇಜಿನ ಆವರಣದಲ್ಲಿ ಚೂರಿ ಇರಿದಿದ್ದರು. ಘಟನೆಯ ಬಳಿಕ ಪೊಲೀಸ್ರು ಚೂರಿ ಇರಿತ ಬಾಲಕನ ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿರುವುದು ತಿಳಿದು ತನ್ನ ಸಂಬಂಧಿಗಳ ಮನೆ ಸೇರಿದ್ದ.
ತನಿಖೆ ನಡೆಸಿದ ಕುಂದಾಪುರ ಎಸ್.ಐ ಹರೀಶ್ ಆರ್ ನಾಯ್ಕ್ ನೇತೃತ್ವದ ತಂಡ ಆತನ ಹುಟ್ಟೂರಿನಿಂದ ಕುಂದಾಪುರಕ್ಕೆ ಕರೆ ತಂದಿದ್ದಾರೆ. ಆರೋಪಿ ಆತನ ಪ್ರಿಯತಮೆ ಹಾಗೂ ಗೆಳೆಯ ಚರ್ಚಿಸಿ ಇರಿಯಲು ಯೋಜನೆ ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ. ಅನೂಪ್ ಗೆ ಇರಿದ ಬಾಲಕನು ಕೋಡಿಗೆ ಹೀಗಿ ತೆಗ್ಗಟ್ಟೆಗೆ ತೆರಳಿ ಕ್ಲಿನಿಕ್ ನಲಿ ಕೈಗೆ ಆಗಿದ್ದ ಗಾಯಕ್ಕೆ ಚಿಕಿತ್ಸೆ ಪಡೆದಿದ್ದ. ಅಲ್ಲದೆ ಅದೇ ದಿನ ಅಲ್ಲದೆ ಸಂಜೆ ಮತ್ತಿಬ್ಬರೊಂದಿಗೆ ಬೆಂಗಳೂರಿಗೆ ರೈಲಿನಲ್ಲಿ ತೆರಳಿದ್ದ. ಬಳಿಕ. ಡಿ 2 ರಂದು ರಾಮನಗರ, ಡಿ.3 ರಂದು ಬಾಗಲಕೋಟೆ, ಡಿ. 4 ರಂದು ಹುಟ್ಟೂರಾದ ಕೊಪ್ಪಳಕ್ಕೆ ತೆರಳಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನ.29 ರಂದು ಬೋರ್ಡ್ ಹೈಸ್ಕೂಲ್ ನ ಅನೂಪ್ ಶೇರಿಗಾರ್ (17) ಎಂಬ ಬಾಲಕನ ಹೊಟ್ಟೆ, ಎದೆ, ಕುತ್ತಿಗೆ ಭುಜ ಕೆನ್ನೆಗೆ ಇರಿದುಕೊಲೆಗೆ ಯತ್ನಿಸಲಾಗಿತ್ತು ಎಂದು ಕೇಸ್ ದಾಖಲಾಗಿತ್ತು.

