ಕೊಂಕಣ ರೈಲ್ವೆ ಮಾನ್ಸೂನ್‌ ವೇಳಾಪಟ್ಟಿ ಪ್ರಕಟ : ಜೂ. 15ರಿಂದ ಅ. 20ರ ವರೆಗೆ ಜಾರಿಗೆ – vishwanews24

Featured, ಉಡುಪಿ, ದಕ್ಷಿಣ ಕನ್ನಡ

ಕೊಂಕಣ ರೈಲ್ವೆ ಮಾನ್ಸೂನ್‌ ವೇಳಾಪಟ್ಟಿ ಪ್ರಕಟ : ಜೂ. 15ರಿಂದ ಅ. 20ರ ವರೆಗೆ ಜಾರಿಗೆ

ಉಡುಪಿ: ಮುಂಗಾರು ಸವಾಲಿಗೆ ಕೊಂಕಣ ರೈಲ್ವೇ ಸಜ್ಜಾಗುತ್ತಿದ್ದು, ಪ್ರಯಾಣಿಕರ ಸುರಕ್ಷೆಗೆ ವಿಶೇಷ ಕ್ರಮ ತೆಗೆದುಕೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮುಂಗಾರು ವೇಳೆಯಲ್ಲಿ ರೈಲು ಸಂಚಾರ ಸಂಬಂಧ ವೇಳಾಪಟ್ಟಿ ಪ್ರಕಟಿಸಿದ್ದು ಜೂ. 15ರಿಂದ ಜಾರಿಗೆ ಬರಲಿದೆ.

ಕೊಂಕಣ ಭಾಗದಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ಭಾರೀ ಮಳೆ, ಗುಡ್ಡ ಕುಸಿತ ಹಾಗೂ ಕಠಿನ ಭೌಗೋಳಿಕ ಪರಿಸ್ಥಿತಿಗಳು ರೈಲು ಸಂಚಾರಕ್ಕೆ ಸವಾಲಾಗುತ್ತವೆ. ಈ ಹಿನ್ನೆಲೆ ಯಲ್ಲಿ ಪ್ರಯಾಣಿಕರ ಸುರಕ್ಷೆ ಹಾಗೂ ರೈಲುಗಳ ನಿರಂತರ ಸಂಚಾರಕ್ಕೆ ಆದ್ಯತೆ ನೀಡಿರುವ ಕೊಂಕಣ ರೈಲ್ವೆ ವ್ಯಾಪಕ ಮುಂಗಾರು ಸಿದ್ಧತೆ ಕೈಗೊಂಡಿದೆ.

ಇದನ್ನೂ ಓದಿ: 

ಜೂ.12ರವರೆಗೆ ಮಂಗಳೂರು ಜಂಕ್ಷನ್ – ಮುಂಬೈ ಸಿಎಸ್‌ಎಂಟಿ ರೈಲು ಥಾಣೆಯವರೆಗೆ ಮಾತ್ರ ಸಂಚಾರ – vishwanews24

ರೈಲ್ವೇ ಮಾರ್ಗದ ವಿವಿಧ ಭಾಗಗಳಲ್ಲಿ ಮೂಲಸೌಕರ್ಯ ಬಲಪಡಿಸುವುದು, ಭೂಸುರಕ್ಷಾ ಕ್ರಮಗಳು, ರಿಯಲ್ ಟೈಮ್ ನಿಗಾವ್ಯವಸ್ಥೆ ತೀವ್ರ ಗಸ್ತು ಹಾಗೂ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿದೆ. ಹವಾಮಾನ ಮಾಹಿತಿ ಪಡೆಯಲು ಭಾರತೀಯ ಹವಾಮಾನ ಇಲಾಖೆ ಜತೆ ಕೊಂಕಣ ರೈಲ್ವೆ ನಿಕಟ ಸಮನ್ವಯದಲ್ಲಿದೆ. ಕೆಲವು ರೈಲು ವಿಭಾಗಗಳಲ್ಲಿ ವೇಗ ನಿಯಂತ್ರಣ ಜಾರಿಗೊಳಿಸ ಲಾಗುತ್ತದೆ. ಇದೇ ಕಾರಣಕ್ಕೆ ಜೂ. 15ರಿಂದ ಅ. 20ರ ವರೆಗೆ ವಿಶೇಷ ಮುಂಗಾರು ವೇಳಾಪಟ್ಟಿ ಜಾರಿಯಲ್ಲಿರಲಿದೆ.

ಪ್ರಯಾಣಿಕರು ಪ್ರಯಾಣ ಆರಂಭಿಸುವ ಮೊದಲು ರೈಲುಗಳ ಆಗಮನ ಹಾಗೂ ನಿರ್ಗಮನ ಸಮಯವನ್ನು ಪರಿಶೀಲಿಸಿಕೊಳ್ಳುವಂತೆ ಕೊಂಕಣ ರೈಲ್ವೇ ಮನವಿ ಮಾಡಿದೆ.

ಇದನ್ನೂ ಓದಿ: 

ಸಿದ್ದರಾಮಯ್ಯ  ಅವರ ಅವಶ್ಯಕತೆ ಇನ್ನೂ ನಮ್ಮ ಪಕ್ಷಕ್ಕೆ ಸಾಕಷ್ಟಿದೆ : ಹೆಚ್‌.ಸಿ ಬಾಲಕೃಷ್ಣ – vishwanews24

Leave a Reply