ಕೊರೊನಾ ಪ್ರಕರಣ : ಸರ್ಕಾರ ಬೇಕಾಬಿಟ್ಟಿ ಮಾರ್ಗಸೂಚಿ ಬಿಡುಗಡೆ ಮಾಡಿದರೆ ಹೋರಾಟ ಕೈಗೊಳ್ಳಲಾಗುವುದು : ಡಿಕೆಶಿ -Vishwanews24

Featured, ರಾಜ್ಯ ನ್ಯೂಸ್

ಕೊರೊನಾ ಪ್ರಕರಣ : ಸರ್ಕಾರ ಬೇಕಾಬಿಟ್ಟಿ ಮಾರ್ಗಸೂಚಿ ಬಿಡುಗಡೆ ಮಾಡಿದರೆ ಹೋರಾಟ ಕೈಗೊಳ್ಳಲಾಗುವುದು : ಡಿಕೆಶಿ -Vishwanews24

ಬೆಂಗಳೂರು: “ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ವೇಳೆ ಸರ್ಕಾರ ಬೇಕಾಬಿಟ್ಟಿ ಮಾರ್ಗಸೂಚಿ ಜಾರಿಗೊಳಿಸಿದಲ್ಲಿ ಹೋರಾಟ ಕೈಗೊಳ್ಳಲಾಗುವುದು” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರ ಜಾರಿಗೊಳಿಸುವ ಮಾರ್ಗ ಸೂಚಿ ಎಲ್ಲರಿಗೂ ಅನ್ವಯವಾಗಬೇಕು. ಬದಲಾಗಿ ಬೇಕಾಬಿಟ್ಟಿ ಮಾರ್ಗಸೂಚಿ ಬಿಡುಗಡೆ ಮಾಡಿದರೆ ನಾವು ರಾಜಕೀಯ ಹೋರಾಟ ಮಾಡುತ್ತೇವೆ” ಎಂದಿದ್ದಾರೆ.

“ಸರ್ಕಾರ ಜನತೆಗೆ ಅನ್ವಯವಾಗುವಂತೆ ಮಾರ್ಗಸೂಚಿ ಬಿಡುಗಡೆ ಮಾಡಲಿ. ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಗಸೂಚಿ ಜಾರಿ ಮಾಡುವುದು ಬೇಡ. ಈ ರೀತಿ ಮಾಡಿದರೆ ಅದು ಪ್ರಜಾಪ್ರಭುತ್ವದ ಹಕ್ಕನ್ನು ಮೊಟಕುಗೊಳಿಸುವ ಯತ್ನವಾಗುತ್ತದೆ. ಜನರ ಸುರಕ್ಷತೆಯ ದೃಷ್ಠಿಯಿಂದ ಕಾನೂನು ಮಾಡಲಿ. ನಾವು ಬೇಡ ಎಂದು ಹೇಳುವುದಿಲ್ಲ. ಆದರೆ, ಎಲ್ಲರೂ ಕಾನೂನನ್ನು ಪಾಲಿಸಬೇಕು” ಎಂದು ತಿಳಿಸಿದ್ದಾರೆ.

ಬಂಟ್ವಾಳ : ಕೊರೊನಾ ಭೀತಿ – ಶ್ರೀ ಕ್ಷೇತ್ರ ಪೊಳಲಿ ಜಾತ್ರೆ ಸಾಂಕೇತಿಕವಾಗಿ ಆಚರಣೆ -Vishwanews24