ಕ್ಷೇತ್ರದ ಅಭಿವೃದ್ಧಿ ಕುರಿತು ಮುಕ್ತ ಚರ್ಚೆಗೆ ಸಿದ್ಧ: ಹಾಲಾಡಿ’
ಕುಂದಾಪುರ ಕ್ಷೇತ್ರದ ಅಭಿವೃದ್ಧಿಗಾಗಿ 496 ಕೋ.ರೂ. ಅನುದಾನ ವಿನಿಯೋಗಿಸಲಾಗಿದೆ. ಆದರೂ ಕೆಲವರು ಅಭಿವೃದ್ಧಿಯಾಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಕುರಿತು ಬಹಿರಂಗ ಚರ್ಚೆಗೆ ಸಿದ್ಧ ಎಂದು ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹೇಳಿದರು.
ಶಿರಿಯಾರ ಕಲ್ಮರ್ಗಿ ರೇಖಾ ಕೆದ್ಲಾಯ ಅವರ ಮನೆಯ ವಠಾರದಲ್ಲಿ ಜರಗಿದ ಶಿರಿಯಾರ ಗ್ರಾ.ಪಂ. ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಜಿ.ಪಂ ಸದಸ್ಯ ಪ್ರತಾಪ ಹೆಗ್ಡೆ ಮಾರಾಳಿ ಮಾತನಾಡಿ, ಹಾಲಾಡಿ ಅವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ಅವರಿಗೆ ಶ್ರೀರಕ್ಷೆಯಾಗಲಿದ್ದು, ಈ ಬಾರಿ 50 ಸಾವಿರಕ್ಕೂ ಅಧಿಕ ಮತದ ಅಂತರದಿಂದ ಜಯಗಳಿಸಲಿದ್ದಾರೆ ಎಂದರು.
ನ್ಯಾಯವಾದಿ ಶಿರಿಯಾರ ಪ್ರಭಾಕರ ನಾಯಕ್, ಶಕ್ತಿ ಕೇಂದ್ರದ ಅಧ್ಯಕ್ಷ ವಂಡಾರು ಪ್ರವೀಣ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿ ಶಂಕರ ಅಂಕದಕಟ್ಟೆ, ಪಕ್ಷದ ಮುಖಂಡರಾದ ಸುರೇಶ್ ಶೆಟ್ಟಿ ಕೊಳ್ಕೆಬೆ„ಲು, ರವೀಂದ್ರನಾಥ ಶೆಟ್ಟಿ ಕೊಳ್ಕೆಬೆ„ಲು, ಅಶೋಕ್ ಪ್ರಭು ಸಾ„ಬ್ರಕಟ್ಟೆ, ಶ್ರೀಧರ ಶೆಟ್ಟಿ, ತಾ.ಪಂ. ಸದಸ್ಯೆ ನಿರ್ಮಲಾ ಶೆಟ್ಟಿ, ಮಾಜಿ ಸದಸ್ಯ ದಿವಾಕರ ಶೆಟ್ಟಿ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸಂತೋಷ ಪೂಜಾರಿ, ಶಿರಿಯಾರ ಗ್ರಾ.ಪಂ. ಅಧ್ಯಕ್ಷೆ ವಿಶಾಲ, ಉಪಾಧ್ಯಕ್ಷ ಹರೀಶ ಕಾಂಚನ್ ಕೊಡ್ಲಬೈಲು, ಸದಸ್ಯರಾದ ಪ್ರದೀಪ್ ಬಲ್ಲಾಳ್, ಸುಧೀಂದ್ರ ಶೆಟ್ಟಿ, ರೇಖಾ ಕೆದ್ಲಾಯ, ವೇದಾವತಿ, ಜಲಜಾ, ಅಮಿತಾ, ಬೇಬಿ ಎಸ್., ಹಿರಿಯರಾದ ಮಹಾಲಿಂಗ ಪೂಜಾರಿ, ಸೋಮ ಪೂಜಾರಿ ಸಕ್ಕಟ್ಟು, ಶೇಖರ ಕುಲಾಲ ಕೊಡ್ಲಬೈಲು ಉಪಸ್ಥಿತರಿದ್ದರು. ಶೇಖರ ಸುವರ್ಣ ನಿರೂಪಿಸಿದರು.
ಕ್ಷೇತ್ರದ ಜನತೆಗೆ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿದಿದೆ. ನಮಗೆ ಕಾರ್ಯಕರ್ತರೇ ಕೂಡ ಜನರು ನಮ್ಮ ಮೇಲೆ ವಿಶ್ವಾಸವಿರಿಸಲಿದ್ದಾರೆ.
– ಹಾಲಾಡಿ ಶ್ರೀನಿವಾಸ ಶೆಟ್ಟಿ
