ಚಂದ್ರಶೇಖರ ಗುರೂಜಿ ಹತ್ಯೆಗೆ ವೈಯಕ್ತಿಕ ದ್ವೇಷ ಹಾಗೂ ಹಗೆತನ ಕಾರಣ : ಸಿಎಂ ಬೊಮ್ಮಾಯಿ – Vishwanews24
ಚಂದ್ರಶೇಖರ ಗುರೂಜಿ ಹತ್ಯೆಗೆ ವೈಯಕ್ತಿಕ ದ್ವೇಷ ಹಾಗೂ ಹಗೆತನ ಕಾರಣ : ಸಿಎಂ ಬೊಮ್ಮಾಯಿ – Vishwanews24
ಬೆಂಗಳೂರು: ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆ ವೈಯಕ್ತಿಕ ದ್ವೇಷ ಹಾಗೂ ಹಗೆತನ ಕಾರಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಲೋಪ ಅಲ್ಲ ಇದು. ಆದರೆ ಇಂತಹ ಮನಸ್ಥಿತಿಗಳನ್ನು ಸರಿ ಮಾಡಬೇಕಿದೆ ಎಂದರು.
ಚಂದ್ರಶೇಖರ ಗುರೂಜಿ ಹತ್ಯೆ ವೈಯಕ್ತಿಕ ದ್ವೇಷ ಹಗೆತನದ ಕಾರಣ. ಇವತ್ತಿನ ಯುವಕರ ಮನಸ್ಥಿತಿಯಿಂದ ಕೆಲವು ಹತ್ಯೆಯಾಗುತ್ತಿದೆ. ಇದರ ಹೊರತು ಕಾನೂನು ಸುವ್ಯವಸ್ಥೆ ಲೋಪ ಅಲ್ಲ ಇದು. ಆದರೆ ಇಂತಹ ಮನಸ್ಥಿತಿಗಳನ್ನು ಸರಿ ಮಾಡಬೇಕಿದೆ. ಆದರೂ ಕಾನೂನು ಸುವ್ಯವಸ್ಥೆ ಗಟ್ಟಿಗೊಳಿಸುತ್ತೇವೆ ಹಾಗೂ ಇಂತಹ ವಾತಾವರಣ ದಮನ ಮಾಡುವ ಕೆಲಸ ಮಾಡುತ್ತೇವೆ ಎಂದರು.
ಮಂಗಳೂರು : ಕರಾವಳಿಯಲ್ಲಿ ಕಾಂಗ್ರೆಸ್ ಮತ್ತೆ ಉದಯವಾಗುವುದು ನಿಶ್ಚಿತ : ಮಧು ಬಂಗಾರಪ್ಪ – Vishwanews24
