ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಎಲ್ಲರನ್ನೂ ಪಶ್ಚಿಮ ಬಂಗಾಳದಿಂದ ಓಡಿಸುತ್ತಾರೆ : ಮಮತಾ ಬ್ಯಾನರ್ಜಿ -Vishwanews24

Featured, ರಾಷ್ಟ್ರ ನ್ಯೂಸ್

ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಎಲ್ಲರನ್ನೂ ಪಶ್ಚಿಮ ಬಂಗಾಳದಿಂದ ಓಡಿಸುತ್ತಾರೆ : ಮಮತಾ ಬ್ಯಾನರ್ಜಿ -Vishwanews24

ಕೋಲ್ಕತ್ತಾ: ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಎಲ್ಲರನ್ನೂ ಪಶ್ಚಿಮ ಬಂಗಾಳದಿಂದ ಓಡಿಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಎರಡನೇ ಸುತ್ತಿನ ಮತದಾನ ಹತ್ತಿರವಾಗುತ್ತಿದ್ದಂತೆ ರಾಜಕೀಯ ರ್ಯಾಲಿಗಳು ಜೋರಾಗಿದ್ದು, ಇಂದು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ 8 ಕಿ.ಮೀ. ವ್ಹೀಲ್ ಚೇರ್ ಮೂಲಕವೇ ಪಾದಯಾತ್ರೆ ನಡೆಸಿದರು. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಬಿಜೆಪಿ ಜಯಗಳಿಸಿದರೆ ಪ್ರತಿಯೊಬ್ಬರನ್ನೂ ಈ ರಾಜ್ಯದಿಂದ ಹೊರಹಾಕಲಿದೆ ಎಂದರು.

ಇದನ್ನೂ ಓದಿ : ಉಡುಪಿ : ಕುಟುಂಬ ಗುರುತಿನ ಚೀಟಿ ತಂತ್ರಾ0ಶದಲ್ಲಿ ಅಂಗವಿಕಲರ ನೋಂದಣಿಗೆ ಸೂಚನೆ -Vishwanews24

ಒಂದು ವೇಳೆ ನೀವು ಬಿಜೆಪಿಗೆ ಮತ ಹಾಕಿದರೆ ಅವರು ನಿಮ್ಮನ್ನು ರಾಜ್ಯದಿಂದಲೇ ಓಡಿಸುತ್ತಾರೆ. ಗೂಂಡಾಗಳನ್ನು ಇಟ್ಟುಕೊಂಡರೆ ಅವರು ಎಲ್ಲವನ್ನೂ ಹಿಡಿದಿಟ್ಟುಕೊಳ್ಳುತ್ತಾರೆ. ಬಂಗಾಳದ ಅಸ್ತಿತ್ವವನ್ನು ಸೆರೆಹಿಡಿಯುತ್ತಾರೆ. ಆದರೆ ಟಿಎಂಸಿಗೆ ಮತ ಹಾಕಿದರೆ ನಿಮ್ಮ ಮನೆ ಬಾಗಿಲಿಗೆ ಉಚಿತ ಪಡಿತರ ಬರಲಿದೆ ಎಂದು ಗುಡುಗಿದ್ದಾರೆ.

ಕ್ಷೇತ್ರದಲ್ಲಿ ಗೆದ್ದ ನಂತರ ನಂದಿಗ್ರಾಮದಲ್ಲಿ ಕಚೇರಿ ತೆರೆಯುತ್ತೇನೆ. ಈ ಆಟದಲ್ಲಿ ನಾವು ಗೆಲ್ಲಬೇಕು. ಬಿಜೆಪಿಯವರು ಗೂಂಡಾಗಿರಿ ಮಾಡಲು ಪ್ರಯತ್ನಿಸಿದರೆ ಪಾತ್ರೆ ಹಾಗೂ ಪೊರಕೆಗಳ ಮೂಲಕವೇ ಓಡಿಸಬೇಕು ಎಂದರು.

ಇದನ್ನೂ ಓದಿ :ರಾಜ್ಯದಲ್ಲಿ 15 ದಿನಗಳ ಕಾಲ ಯಾವುದೇ ಪ್ರತಿಭಟನೆ, ರಾಜಕೀಯ ರ‍್ಯಾಲಿ ಮತ್ತು ಮದುವೆ, ಸಮಾರಂಭ ನಡೆಸಲು ಅವಕಾಶ ಇಲ್ಲ : ಸಿಎಂ ಬಿಎಸ್ ವೈ -Vishwanews24

ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ಅವರ ಭೂಮಿಯನ್ನು ಕದಿಯುತ್ತಿದ್ದಾರೆ. ಅವರ ಭೂಮಿ, ಪಶ್ಚಿಮ ಬಂಗಾಳ, ಪಶ್ಚಿಮ ಬಂಗಾಳದ ಸಂಸ್ಕøತಿಯನ್ನು ಲೂಟಿ ಮಾಡಲು ಬಿಡಬೇಡಿ. ಅಲ್ಲದೆ ನಮ್ಮ ತಾಯಿ, ಸಹೋದರಿಯರ ಗೌರವವನ್ನು ಹಾಳು ಮಾಡಲು ಬಿಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.