ಜನಾರ್ದನ ಪೂಜಾರಿ ಎನ್ಕೌಂಟರ್ ವಿವಾದ : ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು
ಮಂಗಳೂರು :ಸಾಮಾಜಿಕ ಜಾಲತಾಣದಲ್ಲಿ ಜನಾರ್ದನ ಪೂಜಾರಿ ಅವರನ್ನು ಅವಹೇಳನಗೈದಿದ್ದ ಆರೋಪಿಯನ್ನು ಹಕೀಂ ಪುತ್ತೂರು ಎಂದು ಗುರುತಿಸಲಾಗಿದೆ.
ಪುತ್ತೂರು ನಿವಾಸಿ ಹಕೀಂ ಎಂಬಾತ ಈ ಆಡಿಯೋ ಜಾಣತಾಣದಲ್ಲಿ ಹರಿದು ಬಿಟ್ಟ ಆರೋಪಿಯಾಗಿದ್ದು, ಕೆಲ ವರ್ಷಗಳ ಹಿಂದೆ ದುಬೈಗೆ ಹೋಗಿದ್ದು, ಅಲ್ಲಿ ಕೆಲಸಕ್ಕೆ ಸೇರಿಕೊಂಡ್ಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವುದು ಖಚಿತ ಎಂದು ಕಾಂಗ್ರೇಸ್ ಮುಖಂಡ ಜನಾರ್ದನ ಪೂಜಾರಿ ನೀಡಿದ್ದ ಹೇಳಿಕೆಯಿಂದ ಆಕ್ರೋಶಗೊಂಡು ಅವರನ್ನು ಎನ್ಕೌಂಟರ್ ಮಾಡಿ, ಪಕ್ಷದಿಂದ ಹೊರದಬ್ಬಿ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದನು. ಈ ಹೇಳಿಕೆ ವಿರುದ್ಧ ಕರಾವಳಿಗರು ಆಕ್ರೋಶ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ, ಶೀಘ್ರ ಹೇಳಿಕೆ ಕೊಟ್ಟವನನ್ನು ಬಂಧಿಸಬೇಕು ಎಂದು ಸಂಸದ ನಳಿನ್ಕುಮಾರ್ ಕಟೀಲು, ಮಾಜಿ ಶಾಸಕ ಜೆ ಆರ್ ಲೋಬೋ ಸೇರಿದಂತೆ ವಿವಿಧ ಸಂಘಟನೆಗಳು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಂತೆ ನಗರ ಪೊಲೀಸ್ ಆಯುಕ್ತ ಸುರೇಶ್ ಕುಮಾರ್ ಅವರಿಗೆ ಮನವಿ ನೀಡಿದ್ದರು..
ಇದೀಗ ಈತನನ್ನು ಮಂಗಳೂರು ನಗರದ ಪೊಲೀಸರು ದುಬೈಯಲ್ಲಿ ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
