ತಂದೆ-ತಾಯಿ ಆರಾಮಗಿದ್ದಾರೆ. ಆತಂಕ ಪಡುವ ಆಗತ್ಯವಿಲ್ಲ : ಹೆಚ್.‌ ಡಿ ಕುಮಾರಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ತಂದೆ-ತಾಯಿ ಆರಾಮಗಿದ್ದಾರೆ, ಆತಂಕ ಪಡುವ ಆಗತ್ಯವಿಲ್ಲ : ಹೆಚ್.‌ ಡಿ ಕುಮಾರಸ್ವಾಮಿ -Vishwanews24

ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಹೆಚ್​.ಡಿ. ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದ ಕಾರ್ಯಕರ್ತರಿಗೆ ಮತ್ತು ಹಿತೈಷಿ ವಿಡಿಯೋ ಸಂದೇಶ ರವಾನಿಸಿರುವ ದೇವೇಗೌಡರ ಪುತ್ರ, ಮಾಜಿ ಮುಖ್ಯಮಂತ್ರಿ ಹೆಚ್.‌ ಡಿ ಕುಮಾರಸ್ವಾಮಿ ತಂದೆ-ತಾಯಿ ಆರಾಮಗಿದ್ದಾರೆ. ಆತಂಕ ಪಡುವ ಆಗತ್ಯವಿಲ್ಲ ಎಂದಿದ್ದಾರೆ.

ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ ಅವ್ರು, ‘ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಚೆನ್ನಮ್ಮನವ್ರು ಆರಾಮಗಿದ್ದಾರೆ. ತಜ್ಞ ವೈದ್ಯರ ಚಿಕಿತ್ಸೆ ನೀಡ್ತಿದ್ದಾರೆ. ಯಾರು ಕೂಡ ಆತಂಕ ಪಡುವ ಆಗತ್ಯವಿಲ್ಲ.ಇನ್ನು ಯಾರು ಕೂಡ ಆಸ್ಪತ್ರೆ ಬಳಿ ಬರ್ಬೇಡಿ. ಒಳಗಡೆ ಯಾರನ್ನೂ ಬಿಡೋದಿಲ್ಲ. ನಿಮ್ಮ ಆರೈಕೆ ಮೇಲಿರಲಿ ಸಾಕು’ ಎಂದಿದ್ದಾರೆ.

ಇದನ್ನೂ ಓದಿ : ಉಡುಪಿ : ಖಾಸಗಿ ಬಸ್ಸಿನಲ್ಲಿಅನ್ಯ ಕೋಮಿನ ಯುವಕನೊಂದಿಗೆ ಹಿಂದೂ ವಿದ್ಯಾರ್ಥಿನಿ ; ಸುರತ್ಕಲ್ ಬಳಿ ಬಸ್ ತಡೆದು ಬಜರಂಗದಳ ದಾಳಿ -Vishwanews24