ತಿರುಪತಿ ಟಿಕೆಟ್‌ ಬುಕ್ಕಿಂಗ್‌ ಮಾಡೋ ಮುನ್ನ ಎಚ್ಚರ ! ದರ್ಶನದ ನಕಲಿ ಟಿಕೆಟ್‌ ದುಬಾರಿ ಬೆಲೆಗೆ ಮಾರಾಟ , 7 ಜನರ ಬಂಧನ – Vishwanews24

Featured, ರಾಷ್ಟ್ರ ನ್ಯೂಸ್

ತಿರುಪತಿ ಟಿಕೆಟ್‌ ಬುಕ್ಕಿಂಗ್‌ ಮಾಡೋ ಮುನ್ನ ಎಚ್ಚರ ! ದರ್ಶನದ ನಕಲಿ ಟಿಕೆಟ್‌ ದುಬಾರಿ ಬೆಲೆಗೆ ಮಾರಾಟ , 7 ಜನರ ಬಂಧನ – Vishwanews24

ತಿರುಪತಿ : ತಿರುಮಲ ಶ್ರೀವಾರಿ ದರ್ಶನದ ನಕಲಿ ಟಿಕೆಟ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎರಡು ಗ್ಯಾಂಗ್‌ಗಳ 7 ಜನರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ವಿಶೇಷ ದರ್ಶನದ ನಕಲಿ ಟಿಕೆಟ್​ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ, ಭಕ್ತರನ್ನು ವಂಚಿಸುತ್ತಿದ್ದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಈ ಆರೋಪದ ಮೇರೆಗೆ ಟಿಟಿಡಿ ಅಧಿಕಾರಿಗಳು ಎರಡು ಗ್ಯಾಂಗ್‌ಗಳ ೭ ಜನರನ್ನು ಸೋಮವಾರ ತಿರುಮಲ ಪೊಲೀಸ್​ ಠಾಣೆಯಲ್ಲಿ ಬಂದಿಸಿದ್ದಾರೆ. ಬಂಧಿತರನ್ನು ಎಸ್‌ಪಿಎಫ್‌ ಕಾನ್ಸ್‌ಟೇಬಲ್‌ ಎಂ ಕೃಷ್ಣರಾವ್‌, ತಿರುಮಲ ವಿಶೇಷ ಪ್ರವೇಶ ಕೌಂಟರ್‌ನ ನಾಗೇಂದ್ರ, ಚೆಂಗಾರೆಡ್ಡಿ, ದೇವೇಂದ್ರ ಪ್ರಸಾದ್‌ ಮತ್ತು ವೆಂಕಟ್‌ ಲಡ್ಡು ಮಾರಾಟ ಕೌಂಟರ್‌ ಸಿಬ್ಬಂದಿ ಅರುಣ್‌ ರಾಜ್‌, ಟ್ರಾವೆಲ್‌ ಏಜೆನ್ಸಿ ಸಿಬ್ಬಂದಿ ಬಾಲಾಜಿ ಎಂದು ಗುರುತಿಸಲಾಗಿದೆ.

ಕೊರೊನಾ-ಒಮಿಕ್ರಾನ್ ಭೀತಿ :  ರಾಜ್ಯದಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ಜಾರಿ.. Vishwanewsws24

ಈ ಆರೋಪಿಗಳು ಮಧ್ಯಪ್ರದೇಶದಿಂದ ಬಂದ ಭಕ್ತರು ಮಧ್ಯವರ್ತಿಯ ಬಳಿ 300 ರೂ. ಮೌಲ್ಯದ ಟಿಕೆಟ್​ಗೆ ತಲಾ 3,300 ರೂ. ತೆತ್ತು ಖರೀದಿಸಿ, ದೇವರ ದರ್ಶನಕ್ಕೆ ಮುಂದಾಗಿದ್ದರು. ಪ್ರವೇಶದ್ವಾರದ ಬಳಿ ಭಕ್ತರ ಬಳಿ ಇದ್ದ ಟಿಕೆಟ್​ ಪರಿಶೀಲಿಸಿದಾಗ ಅದು ನಕಲಿ ಎಂಬುದು ಸ್ಪಷ್ಟವಾಗಿತ್ತು.

ಹೊಸ ವರ್ಷದಂದು ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಮಧ್ಯಪ್ರದೇಶದಿಂದ ಬಂದಿದ್ದ ಕುಟುಂಬದವರು 300 ರೂ. ಮೌಲ್ಯದ ವಿಶೇಷ ದರ್ಶನದ ಟಿಕೆಟ್​ (ಶ್ರೀವಾರಿ ದರ್ಶನದ ನಕಲಿ ಟಿಕೆಟ್‌) ಅನ್ನು ತಲಾ 7 ಸಾವಿರ ರೂ.ಗೆ ಮಾರಾಟ ಮಾಡಿದ್ದರು. ಮೊದಲು ಪೇದೆ ಕೃಷ್ಣರಾವ್‌ ನೇತೃತ್ವದಲ್ಲಿ ನಕಲಿ ಟಿಕೆಟ್‌ ಮಾರಾಟ ನಡೆಯುತ್ತಿತ್ತು. ಬಳಿಕ ಪ್ರವೇಶ ಕೌಂಟರ್‌ನಲ್ಲಿ ಇರುತ್ತಿದ್ದ ಇದೇ ಗ್ಯಾಂಗ್‌ನ ನಾಗೇಂದ್ರ, ಸ್ಕಾನ್‌ ಮಾಡದೇ ನಕಲಿ ಟಿಕೆಟ್‌ ಪಡೆದವರನ್ನು ಒಳಕ್ಕೆ ಬಿಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕೊರೊನಾ-ಒಮಿಕ್ರಾನ್ ಭೀತಿ :  ರಾಜ್ಯದಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ಜಾರಿ.. Vishwanewsws24

Leave a Reply